ಕಾರ್ಕಳ, ಆ. 15 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ. ತಾಲೂಕು ಶಾಖೆ ಕಾರ್ಕಳ ವತಿಯಿಂದ ಸಂಘದ ಆವರಣದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಜೋಕಿಂ ಮೈಕಲ್ ಎಚ್. ಪಿಂಟೊ ಧ್ವಜಾರೋಹಣ ಮಾಡಿದರು. ರಾಜ್ಯ ಪರಿಷತ್ ಸದಸ್ಯ ಬಾಲಕೃಷ್ಣ ಎನ್.,ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಎಂ., ಅರುಣ್ ಕುಮಾರ್, ಪ್ರವೀಣ್ ಎಂ. ಕೆ. ಹಾಗೂ ಸಂಫದ ಸದಸ್ಯ ಶರತ್ ಕುಮಾರ್ ಉಪಸ್ಥಿತರಿದ್ದರು.