ಶೃಂಗೇರಿ, ಆ. 14: ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್.ಡಿ.ಪಿ.ಐ. ಧ್ವಜ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಭೀಕರ ಗಲಭೆ ನಡೆದ ಬೆನ್ನಿಗೆ ಶೃಂಗೇರಿಯಲ್ಲಿ ಸಂಭವಿಸಿದ ಈ ಘಟನೆ ಆತಂಕಕ್ಕೆ ಕಾರಣವಾಗಿತ್ತು.
ಮಿಲಿಂದ್ ಎಂಬ ಕುಡುಕ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಹತ್ತಿರದಲ್ಲಿದ್ದ ಮಸೀದಿಯ ಹೊರಗೆ ಮಲಗಳು ಬಿಟ್ಟಿರಲ್ಲ್ಲ. ಆಗ ಮಿಲಿಂದ್ ಅಲ್ಲಿಯೇ ಇದ್ದ ಹಳೇ ಧ್ವಜವನ್ನು ಹಿಡಿದುಕೊಂಡು ಹೋಗಿದ್ದ. ಅದನ್ನು ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಲಿಂದ್ ವಿರುದ್ಧ ಈ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು.