ಕಪಿಲ ಗೋಶಾಲೆ ಕೆಡವಿದವರಿಗೆ ಅಕ್ರಮ ಕಸಾಯಿಖಾನೆ ಮುಚ್ಚಿಸುವ ಧೈರ್ಯವಿದೆಯೇ ? ಯೋಗೀಶ್ ಇನ್ನಾ ಪ್ರಶ್ನೆ

ಕಾರ್ಕಳ : ಹಿಂದೂ-ಹಿಂದುತ್ವ ಅಂತ ಹೇಳಿಕೊಂಡು ಅಧಿಕಾರ ಚಲಾಯಿಸುತ್ತಿರುವ ಬಿಜೆಪಿ ಸರಕಾರಕ್ಕೆ ಅಕ್ರಮ ಕಸಾಯಿಖಾನೆ ಮುಚ್ಚಿಸುವ ಧೈರ್ಯವಿದೆಯೇ ಎಂದು ಕಾರ್ಕಳ ಯುವ ಕಾಂಗ್ರೆಸ್‌ ಅಧ್ಯಕ್ಷ ಯೋಗೀಶ್‌ ಇನ್ನಾ ಪ್ರಶ್ನಿಸಿದ್ದಾರೆ. ಮರವೂರಿನಲ್ಲಿ ಪವಿತ್ರ ಗೋಮಾತೆಯನ್ನು ಬೀದಿಗೆ ತರುವ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ಸುಮಾರು 300 ಗೋವುಗಳಿಗೆ ರಕ್ಷಣೆ ಇಲ್ಲದಾಗಿದೆ. ಬಿಜೆಪಿ ಸರಕಾರ ಗೋವುಗಳಿಗೆ ರಕ್ಷಣೆ ನೀಡುವ ರೀತಿ ಇದೇನಾ ? ಹಿಂದುತ್ವದ ಭದ್ರಕೋಟೆಯಲ್ಲಿ ಇಂತಹ ಪರಿಸ್ಥಿತಿ ಬಂದಿದೆ ಎಂದಾದರೆ ಬಿಜೆಪಿಗರ ಕಪಟ ಹಿಂದುತ್ವ ಯಾವ ರೀತಿಯದ್ದು ಎನ್ನವುದು ಜಗಜ್ಜಾಹೀರಾಗಿದೆ ಎಂದು ಯೋಗೀಶ್‌ ಇನ್ನಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































































































































































































































































error: Content is protected !!
Scroll to Top