ಇರ್ವತ್ತೂರು : ಹಿಂದೂ ರುದ್ರಭೂಮಿ ಲೋಕಾರ್ಪಣೆ

ಕಾರ್ಕಳ : ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ದಿ. ಎಚ್. ಗೋಪಾಲ ಭಂಡಾರಿ ಅವರ ಇರ್ವತ್ತೂರು ಅಭಿಮಾನಿಗಳು ನಿರ್ಮಿಸಿದ ಸಾರ್ವಜನಿಕ ಹಿಂದೂ ರುದ್ರಭೂಮಿ ತಂಗುದಾನ ಮತ್ತು ದಾಸ್ತಾನು ಕೊಠಡಿಯನ್ನು ನ. 19ರಂದು ಉದ್ಘಾಟಿಸಲಾಯಿತು. ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅವಲಿನ್ ಲೂಯಿಸ್, ನಿವೃತ್ತ ಅಧ್ಯಾಪಕ ರಮಾನಂದ ಶೆಣೈ, ಉದ್ಯಮಿ ವಿವೇಕ್ ಶೆಣೈ, ಶ್ರೀನಿವಾಸ್ ಭಟ್, ಉಮಾನಾಥ್ ಶೆಣೈ ಇಬ್ರಾಹಿಂ, ಗೋಪಾಲ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯ ಚಂದ್ರರಾಜ ಅಧಿಕಾರಿ, ಉದಯ ಆಚಾರ್ಯ, ರೇವತಿ ಕುಲಾಲ್, ಇರ್ವತ್ತೂರು ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಯ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.



































































































































































































































































error: Content is protected !!
Scroll to Top