ಕಾರ್ಕಳ : ಭಾರಿ ಗಾಳಿ ಮಳೆಗೆ ಕಾಬೆಟ್ಟು ಶಾರದಾ ಗಣೇಶ್ ಎಂಬವರ ಮನೆ ಹಾನಿಗೀಡಾಗಿದ್ದು, ಕಾರ್ಕಳ ಜೇಸಿಐ ಹಾಗೂ ಜೇಸಿರೇಟ್ ವಿಭಾಗ ಆ ಕುಟುಂಬಕ್ಕೆ ನೆರವಾಗಿದೆ. ಇತ್ತೀಚೆಗೆ ಬೀಸಿದ ಭಾರಿ ಗಾಳಿಗೆ ಮನೆ ಹಂಚು ಹಾರಿ ತೊಂದರೆಯಲ್ಲಿದ್ದ ಬಡ ಕುಟುಂಬಕ್ಕೆ (ಕುಟುಂಬದ ಇಬ್ಬರೂ ಸದಸ್ಯರು ಅನಾರೋಗ್ಯ ಪೀಡಿತರು) ಜೇಸಿಐ ಹಾಗೂ ಜೇಸಿರೇಟ್ ವತಿಯಿಂದ ಮನೆಗೆ ಬೇಕಾದ ಶೀಟ್, 15 ಕೆ.ಜಿ. ಅಕ್ಕಿ ನೀಡಲಾಯಿತು. ಕಾರ್ಕಳ ಜೆಸಿಐ ಅಧ್ಯಕ್ಷ ದಿವಾಕರ್ ಬಂಗೇರ, ಕಾರ್ಯದರ್ಶಿ ದಿನೇಶ್ ನಾಯಕ್, ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಪ್ರದೀಪ್ ನಾಯಕ್, ಪದ್ಮಪ್ರಸಾದ್ ಜೈನ್, ಜೇಸಿರೇಟ್ ಅಧ್ಯಕ್ಷೆ ಚಂದ್ರಿಕಾ ದಿವಾಕರ್, ಹರಿಶ್ಚಂದ್ರ ಕುಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.