Breaking News

ಉದ್ಯಮಿ ನಕುಲ್ ದಾಸ್ ಪೈ ಆತ್ಮಹತ್ಯೆ

ಕಾರ್ಕಳ : ಹೆರ್ಮುಂಡೆ ಪದ್ಮಾವತಿ ಕ್ಯಾಶ್ಯೂ  ಇಂಡಸ್ಟ್ರೀಸ್ ಮಾಲಕ,  ಅಜೆಕಾರು ನಿವಾಸಿ ನಕುಲ್ ದಾಸ್ ಪೈ (55) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ತನ್ನ ಫ್ಯಾಕರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉದ್ಯಮದಲ್ಲಿ ಉಂಟಾದ ಆರ್ಥಿಕ ನಷ್ಟವೇ ಆತ್ಯಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ – ಜಿ. ಪರಮೇಶ್ವರ್‌

ಮಂಗಳೂರು : ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.ಮಂಗಳವಾರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌ ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಹೊಸ ಸವಾಲುಗಳೂ ಇಲ್ಲಿ ಹುಟ್ಟಿಕೊಂಡಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ ಎಂದರು. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್​ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ …

ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ – ಜಿ. ಪರಮೇಶ್ವರ್‌ Read More »

ಕಾರ್ಕಳ ಬ್ಲಾಕ್‌ ಇಂಟಕ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್‌ ಕೋಟ್ಯಾನ್‌

ಕಾರ್ಕಳ : ಕಾರ್ಕಳ ಬ್ಲಾಕ್‌ ಇಂಟಕ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್‌ ಎಸ್‌. ಕೋಟ್ಯಾನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಕಳ ತಾಲೂಕಿನಾದ್ಯಂತ ಪಂಚಾಯತ್‌ ಮಟ್ಟದಲ್ಲಿ ಸಮಿತಿ ರಚಿಸಲು ಮತ್ತು ಸ್ಥಳೀಯ ನಾಯಕರ ಮಾರ್ಗದರ್ಶನದೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ.

ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ

ಕಾರ್ಕಳ : ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ನಲ್ಲೂರು ಪರಪ್ಪಾಡಿಯಲ್ಲಿ ಮರಕ್ಕೆ ಡಿಕ್ಕಿಯಾದ ಘಟನೆ ಜೂ. 3 ರಂದು ಸಂಭವಿಸಿದೆ. ಪರಿಣಾಮವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆಯಿಂದ ಬೆಂಗಳೂರಿಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಪಾಜೆಗುಡ್ಡೆ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಓರ್ವನನ್ನು ಶೃಂಗೇರಿ ಮೂಲದ ನಯಾಜ಼್ ಅಹಮದ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗ್ರಾ.ಪಂ. ಸದಸ್ಯ …

ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ Read More »

ಪ್ರಧಾನಿ ಮೋದಿ ಭೇಟಿಯಾದ ಕಾರ್ಕಳದ ಬೀದಿ ವ್ಯಾಪಾರಿ

ಕಾರ್ಕಳ : ಪಿಎಂ – ಸ್ವನಿಧಿ ಫಲಾನುಭವಿ ಕಾರ್ಕಳದ ಬೀದಿಬದಿ ವ್ಯಾಪಾರಿ ಪ್ರಸಾದ್‌ ಬಿ.ಹೆಚ್.‌ ಅವರು ದೆಹಲಿಯಲ್ಲಿ ಜೂ. 1ರಂದು ನಡೆದ ಪಿಎಂ – ಸ್ವನಿಧಿ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ಪಡೆದು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಬೀದಿ ಬದಿ ವ್ಯಾಪಾರಕ್ಕಾಗಿ ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 10 ಸಾವಿರ ರೂ. ಸಾಲ ಪಡೆದ ಪ್ರಸಾದ್‌ ಅದನ್ನು ಅವಧಿಗೆ ಸರಿಯಾಗಿ ಅಂದರೆ 6 ತಿಂಗಳಲ್ಲಿ ಮರುಪಾವತಿ ಮಾಡಿದ್ದರು. ಬಳಿಕ ಯೋಜನೆಯಂತೆ 20 …

ಪ್ರಧಾನಿ ಮೋದಿ ಭೇಟಿಯಾದ ಕಾರ್ಕಳದ ಬೀದಿ ವ್ಯಾಪಾರಿ Read More »

ನಂದಳಿಕೆ : ಮನೆಯಿಂದ 5 ಲ.ರೂ. ನಗ-ನಗದು ಕಳವು

ಕಾರ್ಕಳ : ಕಪಾಟಿನಲ್ಲಿದ್ದ ನಗ, ನಗದು ಸೇರಿ ಸುಮಾರು 5 ಲ.ರೂ. ಮೌಲ್ಯದ ವಸ್ತುಗಳು ಕಳವಾಗಿರುವ ಘಟನೆ ನಂದಳಿಕೆಯಲ್ಲಿ ಮೇ 30 ರಂದು ಬೆಳಕಿಗೆ ಬಂದಿದೆ. ನಂದಳಿಕೆ ಶಿವಶಕ್ತಿ ಮೂಡುಮನೆಯ ಎನ್.ಸುಧಾಕರ ರಾವ್(66) ಎಂಬವರ ಮೂಲಮನೆಯಿಂದ ಈ ಸೊತ್ತುಗಳು ಕಳವಾಗಿವೆ. ಮೂಡುಮನೆಯ ಪಕ್ಕದಲ್ಲೇ ಮೂಲಮನೆಯೂ ಇದೆ.ಸುಧಾಕರ ರಾವ್ ಹೆಂಡತಿಯ ಸುಮಾರು 40 ಗ್ರಾಂ ತೂಕದ ಕರಿಮಣಿ ಸರ-2. 26 ಗ್ರಾಂ.ನ ನೆಕ್ಲೇಸ್ -1, 40 ಗ್ರಾಂ.ನ ಮುತ್ತಿನ ಸರ -1. 30 ಗ್ರಾಂ.ನ ಕಿವಿ ಓಲೆ-3, 15 …

ನಂದಳಿಕೆ : ಮನೆಯಿಂದ 5 ಲ.ರೂ. ನಗ-ನಗದು ಕಳವು Read More »

ಸುಮೇಧ ಫ್ಯಾಷನ್‌ ಇನ್ಸ್ಟಿಟ್ಯೂಟ್‌ ಕಾರ್ಕಳ

ಜೂ. 5 – 8 : ಪ್ಯಾಷನ್‌ ಡಿಸೈನಿಂಗ್‌ ಮಾಹಿತಿ ಮತ್ತು ಕ್ಲೇ ಜುವೆಲ್ಲರಿ ಉಚಿತ ಶಿಬಿರ ಕಾರ್ಕಳ : ಎಸ್‌.ಜೆ. ಆರ್ಕೇಡ್‌ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುಮೇಧ ಫ್ಯಾಷನ್‌ ಇನ್ಸ್ಟಿಟ್ಯೂಟ್‌ನಲ್ಲಿ ಜೂ. 5 ರಿಂದ 8 ರವರೆಗೆ 16 ರಿಂದ 25 ವರ್ಷದೊಳಗಿನ ಎಸ್ಸೆಸೆಲ್ಸಿ, ಪಿಯುಸಿ ಮತ್ತು ಪದವಿ ಮುಗಿಸಿರುವ ವಿದ್ಯಾರ್ಥಿನಿಯರಿಗೆ ಉಚಿತ ಕ್ಲೇ ಜ್ಯುವೆಲ್ಲರಿ ಪ್ಯಾಷನ್‌ ಡಿಸೈನಿಂಗ್‌ ಬಗ್ಗೆ ಉಚಿತವಾಗಿ ಮಾಹಿತಿ ತರಬೇತಿ ನೀಡಲಾಗುತ್ತದೆ. ಆಸಕ್ತರು ಜೂ. 3 ರೊಳಗೆ 7022044193, 9392829919 ಅಥವಾ …

ಸುಮೇಧ ಫ್ಯಾಷನ್‌ ಇನ್ಸ್ಟಿಟ್ಯೂಟ್‌ ಕಾರ್ಕಳ Read More »

ಕರಾವಳಿಯಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಬೇಕು : ಟ್ವೀಟ್‌ ಮೂಲಕ ಸುನಿಲ್‌ ಕುಮಾರ್‌ ಆಗ್ರಹ

ಕಾರ್ಕಳ : ರಾಜ್ಯಾದ್ಯಂತ ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯ ಬಗ್ಗೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಘೋಷಣೆ ಮಾಡಿದ ಬೆನ್ನಲ್ಲೆ ಕರಾವಳಿ ಭಾಗದ ಮಹಿಳೆಯರಿಗೆ ಖಾಸಗಿ ಬಸ್‌ಗಳಲ್ಲೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಟ್ವೀಟ್‌ ಮೂಲಕ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿ. ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ. ಈ ಸಂಬಂಧಿತ ಎರಡು ಸರಣಿ ಟ್ವೀಟ್‌ ಮಾಡಿರುವ ಅವರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ …

ಕರಾವಳಿಯಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಬೇಕು : ಟ್ವೀಟ್‌ ಮೂಲಕ ಸುನಿಲ್‌ ಕುಮಾರ್‌ ಆಗ್ರಹ Read More »

ಬಂಟ್ವಾಳ : ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರಿನಿಂದ ಹಲ್ಲೆ

ಮಂಗಳೂರು: ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಬುಧವಾರ ನಡೆದಿದೆ. ದಾಳಿ ನಡೆಸಿದವರು ಕಾಂಗ್ರೆಸ್ ಕಾರ್ಯಕರ್ತರು ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ಫಲಿತಾಂಶದ ದಿನದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರ ಈ ದಾಳಿ ನಡೆದಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ …

ಬಂಟ್ವಾಳ : ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರಿನಿಂದ ಹಲ್ಲೆ Read More »

ಸಿಎಂ ವಿರುದ್ಧ ಹಿಂದೂ ಕಾರ್ಯಕರ್ತರ ಹತ್ಯೆ ಹೇಳಿಕೆ – ಶಾಸಕ ಹರೀಶ್‌ ಪೂಂಜಾ ವಿರುದ್ಧ ದೂರು ದಾಖಲು

ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಪುತ್ತೂರು ನಗರಸಭಾ ಸದಸ್ಯ ಮೊಹಮ್ಮದ್ ರಿಯಾಝ್ ಅವರು ಪುತ್ತೂರು ನಗರ ಠಾಣೆಯಲ್ಲಿ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ್ದಾರೆ ಎಂದು ಹರೀಶ್ ಪೂಂಜಾ ಅವರು ಸುಳ್ಳು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ …

ಸಿಎಂ ವಿರುದ್ಧ ಹಿಂದೂ ಕಾರ್ಯಕರ್ತರ ಹತ್ಯೆ ಹೇಳಿಕೆ – ಶಾಸಕ ಹರೀಶ್‌ ಪೂಂಜಾ ವಿರುದ್ಧ ದೂರು ದಾಖಲು Read More »

error: Content is protected !!
Scroll to Top