Karkala Utsava

ಗೂಡುದೀಪ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಉತ್ಸವದ ಮೂಲಕ ಗೂಡುದೀಪ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಿದ ಸಚಿವ ಸುನಿಲ್‍ ಕುಮಾರ್ ಕಾರ್ಯ ಪ್ರಶಂಸನೀಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಹೇಳಿದರು. ಅವರು ಮಾ. 21ರಂದು ಕಾರ್ಕಳ ಉತ್ಸವದ ಅಂಗವಾಗಿ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಗೂಡುದೀಪ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಮಂಜುನಾಥ ಪೈ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಮಾತನಾಡಿ, ಕಾರ್ಕಳ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. …

ಗೂಡುದೀಪ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ Read More »

ಕಾರ್ಕಳ ಉತ್ಸವ : ಮಾ. 20ರ ಕಾರ್ಯಕ್ರಮಗಳ ವಿವರ

ಕಾರ್ಕಳ : ಕಾರ್ಕಳ ಉತ್ಸವದ 11ನೇ ದಿನ ಮಾ. 20 ರಂದು ಸಾಂಸ್ಕೃತಿಕ ಕಾರ್ಯಕ್ರಮ ಸ್ವರಾಜ್‌ ಮೈದಾನದಲ್ಲಿ ಸಂಜೆ 6 ಗಂಟೆಯಿಂದ 9.30ರ ವರೆಗೆ ನಡೆಯಲಿರುವುದು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ, ಸಂಜೆ 9.30 ರಿಂದ 11 ಗಂಟೆಯವರೆಗೆ ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ಕರುನಾಡ ವೈಭವ, ರಾತ್ರಿ 11 ಗಂಟೆಗೆ ಸಿಡಿಮದ್ದು ಪ್ರದರ್ಶನವು ನಡೆಯಲಿದೆ. ಸ್ವರಾಜ್‌ ಮೈದಾನದ ವಸ್ತು ಪ್ರದರ್ಶನ ಪ್ರವೇಶ ದ್ವಾರದ ಬಳಿಯಿರುವ ಜಿನರಾಜ್‌ ಹೆಗ್ಡೆ ವೇದಿಕೆಯಲ್ಲಿ ಸಂಜೆ 6.30 …

ಕಾರ್ಕಳ ಉತ್ಸವ : ಮಾ. 20ರ ಕಾರ್ಯಕ್ರಮಗಳ ವಿವರ Read More »

ಬಸ್ ಸ್ಟ್ಯಾಂಡ್ ಉಪವೇದಿಕೆಯಲ್ಲಿ ಭಾರ್ಗವ ವಿಜಯ ಯಕ್ಷಗಾನ

ಕಾರ್ಕಳ : ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಮಿತ್ರ ವೃಂದದವರಿಂದ “ಭಾರ್ಗವ ವಿಜಯ” ಯಕ್ಷಗಾನ ಬಯಲಾಟ ಬಸ್‌ ನಿಲ್ದಾಣದ ಉಪವೇದಿಕೆಯಲ್ಲಿ ಮಾ. 19ರ ರಾತ್ರಿ 8.50ರಿಂದ ನಡೆಯಲಿದೆ.ರಾಮಚಂದ್ರ ಭಟ್‌ ಎಲ್ಲೂರು ನಿರ್ದೇಶನದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಸಂಚಾಲಕತ್ವದಲ್ಲಿ ಯಕ್ಷಗಾನ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಶಿವಶಂಕರ ಬಲಿಪ, ಕೃಷ್ಣರಾಜ ನಂದಳಿಕೆ, ಅನಿರುದ್ಧ ಅತ್ತಾವರ, ಮುಮ್ಮೇಳದಲ್ಲಿ ಅಂಕಣಕಾರ ನಾ. ಕಾರಂತ ಪೆರಾಜೆ, ಜಿತೇಂದ್ರ ಕುಂದೇಶ್ವರ, ಹಿರಿಯ ಪತ್ರಕಕರ್ತರಾದ ಹರ್ಷ, ರಾಘವ …

ಬಸ್ ಸ್ಟ್ಯಾಂಡ್ ಉಪವೇದಿಕೆಯಲ್ಲಿ ಭಾರ್ಗವ ವಿಜಯ ಯಕ್ಷಗಾನ Read More »

ಬಹು ಜನರ ಅಪೇಕ್ಷೆ ಮೇರೆಗೆ ಆಹಾರ ಮೇಳ, ವಸ್ತುಪ್ರದರ್ಶನ ಮುಂದುವರಿಕೆ – ಸುನಿಲ್‌ ಕುಮಾರ್

ಕಾರ್ಕಳ : ಕಾರ್ಕಳ ಉತ್ಸವದಂಗವಾಗಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ, ಆಹಾರ ಮೇಳಕ್ಕೆ ಭಾರಿ ಸ್ಪಂದನೆಯಿದ್ದು, ಬಹುಜನರ ಅಪೇಕ್ಷೆ ಮೇರೆಗೆ ದೀಪಾಲಂಕಾರ, ವಸ್ತುಪ್ರದರ್ಶನ, ಬೋಟಿಂಗ್‌ ಉತ್ಸವ, ಆಹಾರ ಮೇಳವನ್ನು ಮಾ. 22ರವರೆಗೆ ಮುಂದುವರಿಸಲಾಗುವುದು ಎಂದು ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿರುತ್ತಾರೆ.

ಮೋದ ಡಿಲೈಟ್‌ ಇನ್ಸ್ಟೆಂಟ್‌ ಹೆಲ್ತ್‌ ಮಿಕ್ಸ್‌ ಕಾರ್ಕಳ ಉತ್ಸವದ ವಸ್ತು ಪ್ರದರ್ಶನ ಮಳಿಗೆಯಲ್ಲಿ ಲಭ್ಯ

ಕಾರ್ಕಳ : ಶೈನ್‌ ಉತ್ಪನ್ನಗಳ ನೂತನ ಉತ್ಪನ್ನ, 34 ಬಗೆಯ ಒಣ ಹಣ್ಣುಗಳು, ಮತ್ತು 12 ಬಗೆಯ ಸಿರಿಧಾನ್ಯಗಳನ್ನೊಳಗೊಂಡ ಮೋದ ಡಿಲೈಟ್‌ ಇನ್ಸ್ಟೆಂಟ್‌ ಹೆಲ್ತ್‌ ಮಿಕ್ಸ್‌, ಕಾರ್ಕಳ ಉತ್ಸವದ ವಸ್ತು ಪ್ರದರ್ಶನ ಮಳಿಗೆಯ 12ನೇ ಅಂಗಡಿಯಲ್ಲಿ ಲಭ್ಯವಿದೆ.ಗ್ರಾಹಕರು ಉತ್ತಮ ಆರೋಗ್ಯಕ್ಕಾಗಿ ತಯಾರಿಸಿದ ಆಹಾರವನ್ನು ಖರೀದಿಸಿ, ಪ್ರೋತ್ಸಾಹಿಸಿ.ಸಂಪರ್ಕಿಸಿ : ಪ್ರಶಾಂತ್‌ ಜೈನ್‌, ಪವನ್‌ ಜೈನ್‌ : 9686766222

ಆಕರ್ಷಕ ಉತ್ಸವ ಮೆರವಣಿಗೆ, ಜನಜಂಗುಳಿ

ಕಾರ್ಕಳ : ಕಾರ್ಕಳ ಉತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ ಉತ್ಸವ ಮೆರವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಸ್ವರಾಜ್ ಮೈದಾನದಿಂದ ಆರಂಭಗೊಂಡು ಬಂಡೀಮಠ, ಸಾಲ್ಮರ, ರಥಬೀದಿ, ಮೂರು ಮಾರ್ಗ, ವಿಸ್ಕೃತ ಬಸ್‌ನಿಲ್ದಾಣ, ಅನಂತಶಯನ ರಸ್ತೆ ಮೂಲಕ ಸಾಗಿ 3 ಕಿ.ಮೀ ದೂರದ ಸ್ವರಾಜ್ ಮೈದಾನದ ತನಕ ಮೆರವಣಿಗೆ ಸಾಗಿತು. ನಗರದ ರಸ್ತೆಯ ಇಕ್ಕೆಲಗಳಲ್ಲಿ ಮೆರವಣಿಗೆಯನ್ನು ವೀಕ್ಷಿಸಲು ಜನಸಂದಣಿ ಸೇರಿದ್ದು ಎಲ್ಲೆಲ್ಲೂ ಜನ ಸಾಗರವೇ ಕಾಣುತ್ತಿತ್ತು. ಮೆರವಣಿಗೆಯಲ್ಲಿ ನೂರಕ್ಕೂ ಮಿಕ್ಕಿದ ಕಲಾತಂಡಗಳ 10 ಸಾವಿರ ಮಂದಿ …

ಆಕರ್ಷಕ ಉತ್ಸವ ಮೆರವಣಿಗೆ, ಜನಜಂಗುಳಿ Read More »

ಕಾರ್ಕಳ ಉತ್ಸವ : ಮಾ. 19ರ ಕಾರ್ಯಕ್ರಮಗಳ ವಿವರ

ಕಾರ್ಕಳ : ಕಾರ್ಕಳ ಉತ್ಸವದ 10ನೇ ದಿನವಾದ ಮಾ. 19ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.ಸ್ವರಾಜ್‌ ಮೈದಾನದ ಜಸ್ಟೀಸ್‌ ಕೆ. ಎಸ್.‌ ಹೆಗ್ಡೆ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ 11 ಗಂಟೆಯವರೆಗೆ ಖ್ಯಾತ ಗಾಯಕರಾದ ಗುರುಕಿರಣ್‌, ವಿಜಯಪ್ರಕಾಶ್‌, ಹೇಮಂತ್‌, ಅನುರಾಧ ಭಟ್‌, ಶಮಿತಾ ಮಲ್ನಾಡ್‌, ಹರ್ಷ, ಅಂಕಿತಾ ಕುಂದು, ನಿಹಾಲ್‌ ತಾವ್ರೋ, ದೀಪಿಕ ಶ್ರೀಕಾಂತ್ ಅವರಿಂದ ಸಂಗೀತ ರಸ ಸಂಜೆ ಮತ್ತು ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.ಸ್ವರಾಜ್‌ ಮೈದಾನದ ಜಿನರಾಜ …

ಕಾರ್ಕಳ ಉತ್ಸವ : ಮಾ. 19ರ ಕಾರ್ಯಕ್ರಮಗಳ ವಿವರ Read More »

ಕಾರ್ಕಳ ಉತ್ಸವ : ಅವ್ವ ನನ್ನವ್ವ ನಾಟಕ ಪ್ರದರ್ಶನ

ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ಮಾ. 19ರಂದು ರಾತ್ರಿ 9ಗಂಟೆಗೆ ಕೋಟಿಚೆನ್ನಯ್ಯ ಥೀಂ ಪಾರ್ಕ್‌ ನಲ್ಲಿ ನಾಟ್ಕದೂರು ಮುದ್ರಾಡಿಯ ನಮ್ಮ ತುಳುವೆರ್‌ ಕಲಾ ಸಂಘಟನೆ ಪ್ರಸ್ತುತ ಪಡಿಸುವ ಅವ್ವ ನನ್ನವ್ವ ನಾಟಕ ಪ್ರದರ್ಶನವಾಲಿದೆ.

ಮಣ್ಣಿನ ಕಲಾಕೃತಿಯಲ್ಲಿ ಮೂಡಿಬಂದ ಸಚಿವ ಸುನಿಲ್‌ ಕುಮಾರ್‌

ಕಾರ್ಕಳ : ಅದ್ದೂರಿಯಾಗಿ ನಡೆಯುತ್ತಿರುವ ಕಾರ್ಕಳ ಉತ್ಸವದ ರೂವಾರಿ ಇಂಧನ,ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನಿಲ್‌ ಕುಮಾರ್‌ ಅವರ ಕಲಾಕೃತಿಯನ್ನು ಬೆಂಗಳೂರಿನ ಕಲಾಕಾರರೊಬ್ಬರು ಸಚಿವರ ಸಮ್ಮುಖದಲ್ಲೇ ರಚಿಸಿದರು.ಉತ್ಸವದ ಅಂಗವಾಗಿ ಸ್ವರಾಜ್‌ ಮೈದಾನದಲ್ಲಿ ನಡೆಯುವ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ವತಿಯಿಂದ ಚಿತ್ರಕಲಾ ಶಿಬಿರವನ್ನು ಈ ಸಂದರ್ಭದಲ್ಲಿ ಸಚಿವರು ಉದ್ಘಾಟಿಸಿದರು.ಚಿತ್ರಕಲಾ ಶಿಬಿರದ ಮೂಲಕ ನಾಡಿನ ಎಲ್ಲಾ ಕಲಾವಿದರು ಕಾರ್ಕಳಕ್ಕೆ ಬರುಂವತಾಗಿದೆ. ಈ ಮೂಲಕ ನಾಡಿನ ಕಲೆ ಕಾರ್ಕಳದಲ್ಲಿ ಆನಾವರಣಗೊಳ್ಳುವಂತಾಗಿದೆ, ಕಾರ್ಕಳದ ಕಲೆ ಎಲ್ಲೆಡೆ ಪಸರಿಸಲೂ ಈ ಶಿಬಿರ ಪೂರಕವಾಗಿದೆ.ಒಟ್ಟಿನಲ್ಲಿ …

ಮಣ್ಣಿನ ಕಲಾಕೃತಿಯಲ್ಲಿ ಮೂಡಿಬಂದ ಸಚಿವ ಸುನಿಲ್‌ ಕುಮಾರ್‌ Read More »

ಕಾರ್ಕಳ ಉತ್ಸವ : ಐತಿಹಾಸಿಕ ಉತ್ಸವ ಮೆರವಣಿಗೆಗೆ ಕ್ಷಣಗಣನೆ

ಕಾರ್ಕಳ : ಐತಿಹಾಸಿಕ ಕಾರ್ಕಳ ಉತ್ಸವದ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.ಉತ್ಸವ ಮೆರವಣಿಗೆಯು ಸಮಯಕ್ಕೆ ಸರಿಯಾಗಿ ಮಾ. 18ರಂದು ಸಂಜೆ 3 ಗಂಟೆಗೆ ಆರಂಭವಾಗಲಿದ್ದು,ಕೇಂದ್ರ ಸಚಿವೆ,ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ. ಬಂಡಿಮಠದಿಂದ ಹೊರಡುವ ಉತ್ಸವ ಮೆರವಣಿಗೆಯಲ್ಲಿ ವಿವಿಧ ಭಾಗಗಳ ನೂರಕ್ಕೂ ಮಿಕ್ಕಿ ಕಲಾತಂಡಗಳು ಪಾಲ್ಗೊಳ್ಳಲಿದೆ.ನಗರದ ಹೊರಭಾಗದಿಂದ ಬರುವವರು 2 ಗಂಟೆಗೆ ಮುಂಚಿತವಾಗಿ ನಗರ ತಲುಪಬೇಕಿದೆ.ಬಂಡಿಮಠದಿಂದ ಸ್ವರಾಜ್‌ ಮೈದಾನದವರೆಗೆ ನಡೆಯಲಿರುವ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಾನೀಯ ವ್ಯವಸ್ಥೆ ಮಾಡಲಾಗಿದೆ. ಬೆಲ್ಲ ನೀರು, ಮಜ್ಜಿಗೆ, ಜ್ಯೂಸ್‌ …

ಕಾರ್ಕಳ ಉತ್ಸವ : ಐತಿಹಾಸಿಕ ಉತ್ಸವ ಮೆರವಣಿಗೆಗೆ ಕ್ಷಣಗಣನೆ Read More »

error: Content is protected !!
Scroll to Top