ವಾಲಿಬಾಲ್‌ : ಕ್ರೈಸ್ಟ್‌ಕಿಂಗ್‌ ಬಾಲಕಿಯರ ತಂಡ ಮೈಸೂರು ವಿಭಾಗ ಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕುಂದಾಪುರ ವಿವೇಕ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಸತತ ಎರಡನೇ ಬಾರಿಗೆ ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.

ಶಗುನ್ ಎಸ್. ವರ್ಮಾ, ಶೈನಿ ಡಿ’ಸೋಜಾ, ಅವ್ನಿ ಆರ್. ಕುಮಾರ್, ಸಾದಿಯ ಮೆಹರ್, ದಿತ್ಯ ಶೆಟ್ಟಿ (7ನೇ ತರಗತಿಯ), ಶಾನ್ವಿ ಶೆಟ್ಟಿ, ಐಶ್ವರ್ಯ, ಪಾವನಿ (6ನೇ ತರಗತಿಯ ), ಸಾಂಚಿ ರಾವ್, ವಿಲ್ಶ ಡಿ’ಸೋಜಾ ತಂಡದ (8ನೇ ತರಗತಿಯ) ಆಯ್ಕೆಯಾದ ವಿದ್ಯಾರ್ಥಿಗಳು. ಶೈನಿ ಡಿ’ಸೋಜಾ ಅಲ್ ರೌಂಡರ್ ಪ್ರಶಸ್ತಿ ಪಡೆದರೆ, ಶಗುನ್ ವರ್ಮಾ ಉತ್ತಮ ಅಟ್ಯಾಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ನಾಯ್ಕ್ ತಂಡದ ನೇತೃತ್ವ ವಹಿಸಿದ್ದರು.









































































































































































error: Content is protected !!
Scroll to Top