ಶಿವಪುರದ ಭಾರತಿ ಗೋಪಾಲ್ ಅವರಿಗೆ ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ

ಹೆಬ್ರಿ : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡಿದ ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿಗೆ ಸ್ಯಾಕ್ಸೋಫೋನ್ ಕಲಾವಿದೆ ಹೆಬ್ರಿ ಶಿವಪುರದ ಭಾರತಿ ಗೋಪಾಲ್ ಭಾಜನರಾಗಿದ್ದಾರೆ.
ಸೆ. 1 ರಂದು ಬೆಂಗಳೂರಿನ ಕೋದಂಡರಾಮ ವಿದ್ಯಾರ್ಥಿ ಸೇವಾ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹೆಚ್.‌ ಎಲ್.‌ ಎನ್.‌ ರಾವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಬಿ.‌ ಎ. ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಶಿ ಉಪಸ್ಥಿತರಿದ್ದರು.































































































































































error: Content is protected !!
Scroll to Top