ಕಾರ್ಕಳ : ನಗರದ ಕಾವೇರಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಕಾರ್ಕಳ ನಗರ ಠಾಣಾ ಪಿಎಸ್ಐ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಿಬಂದಿ ಗಸ್ತು ಕರ್ತವ್ಯದಲ್ಲಿರುವಾಗ ದೊರೆತ ಮಾಹಿತಿ ಮೇರೆಗೆ ಕಸಬಾ ಗ್ರಾಮದ ಕಾವೇರಡ್ಕ ಎಂಬಲ್ಲಿ ಕೆಲವು ವ್ಯಕ್ತಿಗಳು ಒಟ್ಟು ಸೇರಿ ಹಣ ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿಯನ್ನು ನಡೆಸಿದ್ದರು.
ತೆಳ್ಳಾರು ನಿವಾಸಿ ವಿಜಯ್ ಕುಮಾರ್(38), ಪುಲ್ಕೇರಿ ನಿವಾಸಿ ಶಾಹಿದ್ ಪಿ.ಬಿ. (38), ಕುಂಬ್ರಪದವು ನಿವಾಸಿ ಸೋಮನಾಥ (30), ಕಸಬಾ ಗ್ರಾಮ ನಿವಾಸಿ ಸಂತೋಷ (38) ಎಂಬವರನ್ನು ವಶಕ್ಕೆ ಪಡೆದಿದ್ದು ಅವರಿಂದ ಜುಗಾರಿ ಆಟಕ್ಕೆ ಬಳಸಿದ 7,380 ರೂ. ನಗದು, ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ
