ಕಾರ್ಕಳ : ದ.ಕ ಮತ್ತು ಉಡುಪಿ ಜಿಲ್ಲಾ ಕರ್ನಾಟಕ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಫೆ. 4 ಮತ್ತು 5 ರಂದು ಸ್ವರಾಜ್ ಮೈದಾನದಲ್ಲಿ ಕ್ರೀಡಾಕೂಟ ಜರುಗಲಿದೆ. ಫೆ. 4 ರಂದು ಬೆಳಿಗ್ಗೆ 8:30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಘದ ಹಿರಿಯ ಚಿನ್ನಸ್ವಾಮಿ ಜೋಡುಕಟ್ಟೆ, ಗೌರವ ಸಲಹೆಗಾರ ಈಶ್ವರ ಸಾಲಿಗ್ರಾಮ, ಗೌರವ ಅಧ್ಯಕ್ಷರಾದ ಅಶೋಕ್ ಪರ್ಕಳ ಹಾಗೂ ಈಶ್ವರ ಕಟಪಾಡಿ ಉದ್ಘಾಟಿಸಲಿರುವರು. ಕ್ರಿಕೆಟ್, ಹಗ್ಗಜಗ್ಗಾಟ, ಮಕ್ಕಳಿಗೆ ವಿಶೇಷ ಆಟೋಟ ಸ್ಪರ್ಧೆ ಹಾಗೂ ಮನೋರಂಜನಾ ಕ್ರೀಡಾಕೂಟ, ಪುರುಷರು ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಲಿದೆ.
ಫೆ. 5 ರಂದು ಸಂಜೆ 4:30 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ವಿ. ಸುನೀಲ್ ಕುಮಾರ್ ಭಾಗವಹಿಸಲಿರುವರು. ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೌರವಧ್ಯಕ್ಷ ಕೇಶವ್ ಬಲರಾಜ, ದ.ಕ ಅಧ್ಯಕ್ಷ ಸೆಲ್ವಕುಮಾರ್, ಹಿರಿಯ ಚಿನ್ನಸ್ವಾಮಿ, ಗೌರವ ಸಲಹೆಗಾರ ಜಗದೀಶ್ ಪರ್ಕಳ ಉಪಸ್ಥಿತರಿರಲಿರುವರು.
ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ಪ್ರಥಮ 11,111 ರೂ., ದ್ವಿತೀಯ 6,666 ರೂ. ನಗದು ಬಹುಮಾನ ಹಾಗೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಎಸೆತಗಾರ ಮತ್ತು ಉತ್ತಮ ದಾಂಡಿಗ ಪ್ರಶಸ್ತಿ, ಹಗ್ಗ ಜಗ್ಗಾಟದಲ್ಲಿ ವಿಶೇಷ ಆಕರ್ಷಕ ಹಾಗೂ ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.