ಕಾರ್ಕಳ : ವೈದ್ಯಕೀಯ ಪ್ರಕೋಷ್ಠ ಭಾರತೀಯ ಜನತಾ ಪಕ್ಷ ಕಾರ್ಕಳ ಹಾಗೂ ಮೇಯರ್ ಲ್ಯಾಬ್ ಬೆಂಗಳೂರು ಸಹಯೋಗದೊಂದಿಗೆ ಶುಕ್ರವಾರ ಬಜಗೋಳಿಯ ತುಡರ್ ಕಾಂಪ್ಲೆಕ್ಸ್ನಲ್ಲಿ ಮೂಳೆ ಸಾಂದ್ರತಾ ತಪಾಸಣೆ, ಕೊಲೆಸ್ಟ್ರಾಲ್, ಮಧುಮೇಹ, ರಕ್ತದೊತ್ತಡ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಯಿತು. ಶಿಬಿರದಲ್ಲಿ 110 ಮಂದಿ ಮಧುಮೇಹ, 91 ಮಂದಿ ಮೂಳೆ ಸಾಂದ್ರತೆ, 25 ಮಂದಿ ಕೊಲೆಸ್ಟ್ರಾಲ್ ತಪಾಸಣೆ ನಡೆಸಿದರು. ಡಾ. ರಾಮ್ದಾಸ್ ಹೆಗ್ಡೆ ಅವರು ಶಿಬಿರದ ನೇತೃತ್ವ ವಹಿಸಿದ್ದರು.