ಶಂಕರಬೆಟ್ಟು ಬೊಲಲು ಬೈಲು ಗದ್ದೆಯಲ್ಲಿ ಜ್ಞಾನಸುಧಾ ಎನ್ಎಸ್ಎಸ್ ವಿದ್ಯಾರ್ಥಿಗಳ ಕಾರ್ಯಕ್ರಮ
ಕಾರ್ಕಳ (ನ.1): ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕದ ಸಹಭಾಗಿತ್ವದಲ್ಲಿ ಕುಕ್ಕುಂದೂರು ಶಂಕರಬೆಟ್ಟು ಮನೆಯ ಬೊಲಲು ಬೈಲು ಗದ್ದೆಯಲ್ಲಿ ನ.1 ರಂದು ಕೆಸರ್ಡು ಒಂಜಿ ದಿನ ʼಕಲ-ಕಂಬುಲʼ ಕಾರ್ಯಕ್ರಮ ನಡೆಯಲಿದೆ.
ಇಂದಿನ ಪೀಳಿಗಿಗೆ ಕೃಷಿ ಬದುಕಿನ ಮಹತ್ವತೆಯನ್ನು ತಿಳಿಸುವ ಹಾಗೂ ಕೆಸರಿನೊಂದಿಗೆ ಕೃಷಿಕರ ಭಾವನಾತ್ಮಕ ಸಂಬಂಧವನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ಸಲುವಾಗಿ ಈ ಕಾರ್ಯಕ್ರಮ ನಡೆಯುತ್ತದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.