ಟಿಸಿ ಬದಲಾವಣೆ : ರೈತನಿಂದ ಹಣದ ಬೇಡಿಕೆ : ಜೆಸ್ಕಾಂ ಸೆಕ್ಷನ್‌ ಅಧಿಕಾರಿ ಲೋಕಾಯುಕ್ತ ಬಲೆಗೆ

ಹೊಸಪೇಟೆ : ಲಂಚ ಪಡೆಯುತ್ತಿದ್ದ ವೇಳೆ ಜೆಸ್ಕಾಂ ಸೆಕ್ಷನ್‌ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಅ.28ರಂದು ನಡೆದಿದೆ. ಜೆಸ್ಕಾಂ ಸೆಕ್ಷನ್‌ ಅಧಿಕಾರಿ ಎಚ್.‌ ಫಕೀರಪ್ಪ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಂಡಿಹಳ್ಳಿ ಗ್ರಾಮದ ನಿವಾಸಿ ರೈತ ದಾದಾಪೀರ್‌ ಎಂಬುವರು ಹೊಲದಲ್ಲಿರುವ ಟಿಸಿ ಸುಟ್ಟುಹೋದ ಹಿನ್ನೆಲೆಯಲ್ಲಿ ಬದಲಾವಣೆಗೆ ರೂ.15 ಸಾವಿರ ಜೆಸ್ಕಾಂ ಅಧಿಕಾರಿ ಬೇಡಿಕೆಯೊಡ್ಡಿದ್ದು, ಮುಂಗಡವಾಗಿ ರೂ.2 ಸಾವಿರ ಪಡೆದಿದ್ದು, ಮಗದೊಮ್ಮೆ ಎಇಇ ಕಚೇರಿಯಲ್ಲಿ ರೂ. 4 ಸಾವಿರ ಹಣ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸೆಕ್ಷನ್‌ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.





























































































































































































































error: Content is protected !!
Scroll to Top