ಯಕ್ಷ ರಂಗಾಯಣ ಸಂಚಾರಿ ರಂಗತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ


ಕಾರ್ಕಳ : ಕಾರ್ಕಳ ಯಕ್ಷ ರಂಗಾಯಣ ಹೊಸದಾಗಿ ಆರಂಭಿಸುವ ಅಲ್ಪ ಅವಧಿ (3 ತಿಂಗಳು)ಯ ಸಂಚಾರಿ ರಂಗ ತಂಡಕ್ಕೆ ಕಲಾವಿದರನ್ನು ಆಹ್ವಾನಿಸಲಾಗಿದೆ. ರಂಗಭೂಮಿಯಲ್ಲಿ ಅನುಭವ ಹೊಂದಿರುವ ತಾಳ-ಲಯ-ಸಂಗೀತ-ಕುಣಿತದ ಕನಿಷ್ಠ ಜ್ಞಾನವಿರುವ, ಕನ್ನಡವನ್ನು ಸ್ಪಷ್ಟವಾಗಿ ಓದಲು- ಉಚ್ಛರಿಸುವ 18 ರಿಂದ 30 ವರ್ಷದೊಳಗಿನ ಕಲಾವಿದರು ಯಕ್ಷ ರಂಗಾಯಣದ ಕಲಾವಿದರಾಗಿ ಸೇರಲು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರಿಗೆ ಸರಕಾರದ ನಿಯಮಾನುಸಾರ ಮಾಸಿಕ ವೇತನ ದೊರೆಯಲಿದೆ. ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಸಂಪೂರ್ಣ ಸ್ವ- ವಿವರಗಳನ್ನು ವಿಶೇಷ ಕರ್ತವ್ಯಾಧಿಕಾರಿ, ಯಕ್ಷ ರಂಗಾಯಣ, ಕೋಟಿ ಚೆನ್ನಯ ಥೀಂ ಪಾರ್ಕ್, ಕಾರ್ಕಳ ಇಲ್ಲಿಗೆ ಅ. 25ರೊಳಗೆ ಕಳುಹಿಸಕೊಡಬಹುದಾಗಿದೆ. ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಯಕ್ಷ ರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಹಾಗೂ ಯಕ್ಷ ರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































































































error: Content is protected !!
Scroll to Top