ಕಾರ್ಕಳ : ಕೈ ಕಾಲು ತೊಳೆಯಲೆಂದು ತೋಡು ಬಳಿ ಹೋದ ವ್ಯಕ್ತಿ ನೀರುಪಾಲಾದ ಘಟನೆ ಇರ್ವತ್ತೂರಿನಲ್ಲಿ ನಡೆದಿದೆ. ಇರ್ವತ್ತೂರು ಗ್ರಾಮದ ಪಾಲ್ತಟ್ಟು ಸತೀಶ್ ಬಂಗೇರಾ (45) ಎಂಬವರು ಗದ್ದೆ ಕೆಲಸ ಮುಗಿಸಿ ಕೈ ಕಾಲು ತೊಳೆಯಲೆಂದು ತೋಡಿನ ಬಳಿಗೆ ತೆರಳಿದಾಗ ನೀರುಪಾಲಾಗಿದ್ದಾರೆ. ಶುಕ್ರವಾರ ವಿಪರೀತ ಮಳೆಯಿದ್ದ ಕಾರಣ ತೋಡಿನಲ್ಲಿ ಧುಮ್ಮಿಕ್ಕಿ ನೀರು ಹರಿಯುತ್ತಿತ್ತು. ಹೀಗಾಗಿ ಸತೀಶ್ ಅವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಶನಿವಾರ ಅವರ ಮೃತ ದೇಹ 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೃತರು ಅಂಗನವಾಡಿ ಸಹಾಯಕಿ ಶಶಿಪ್ರಭಾ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.