ಕಾರ್ಕಳ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸುವೊಂದು ಸಾವಿಗೀಡಾದ ಘಟನೆ ಗುರುವಾರ ಕಾರ್ಕಳ ಕಸಬಾ ಗ್ರಾಮ ಕಾಳಿಕಾಂಬ ದೇವಸ್ಥಾನದ ಬಳಿ ನಡೆದಿದೆ. ಕರಿಯಕಲ್ಲು ಸುಜಾತ ಭೋಜ ಪೂಜಾರಿ ಎಂಬವರಿಗೆ ಸೇರಿದ ಹಸು ಕಾಳಿಕಾಂಬ ಬಳಿಯ ರವೀಂದ್ರ ನಾಥ ಹೆಗ್ಡೆಯವರ ತೋಟದಲ್ಲಿ ಮೇಯುತ್ತಿದ್ದ ಸಂದರ್ಭ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಸಾವಿಗೀಡಾಗಿದೆ. ಪಶು ವೈದ್ಯರು ಡಾ. ವಾಸುದೇವ ಪೈ, ಮೆಸ್ಕಾಂ ಸಿಬ್ಬಂದಿಯಾದ ದಯಾನಂದ, ಪ್ರಕಾಶ್, ಸಂತೋಷ್, ಕ್ಷತ್ರಿಯ ಮರಾಠ ಸಮಾಜದ ಮುಖಂಡ ಪ್ರಕಾಶ್ ರಾವ್ ಘಟನಾ ಸ್ಥಳದಲ್ಲಿದ್ದರು.