ಜೈಪುರ: ಬಿಜೆಪಿ ನಾಯಕಲಿ ನೂಪುರ್ ಶರ್ಮ ತಲೆ ಕಡಿಯುತ್ತೇನೆ ಎಂದು ಹೇಳಿ ಪ್ರಚೋದನಕಾರಿ ವೀಡಿಯೊ ಅಪ್ಲೋಡ್ ಮಾಡಿ ತಲೆಮರೆಸಿಕೊಂಡಿದ್ದ ಅಜ್ಮೇರ್ ದರ್ಗಾದ ಮೌಲ್ವಿ ಸಲ್ಮಾನ್ ಚಿಸ್ತಿ ಎಂಬಾತನನ್ನು ಪೊಲೀಸರೆಉ ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಸಲ್ಮಾನ್ ಚಿಸ್ತಿ ಪ್ರವಾದಿಯನ್ನು ಅವಮಾನಿದ ಆರೋಪಕ್ಕೊಳಗಾಗಿರುವ ನೂಪುರ್ ಶರ್ಮ ತಲೆ ಕಡಿಯಬೇಕು. ಯಾರಾದರೂ ಅವರ ತಲೆ ಕಡಿದರೆ ನನ್ನ ಮನೆಯನ್ನೇ ಉಡುಗೊರೆಯಾಗಿ ಕೊಡುತ್ತೇನೆ.ಆಕೆಯನ್ನು ಗುಂಡಿಟ್ಟು ಸಾಯಿಸಬೇಕಿತ್ತು ಎಂದು ಹೇಳಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದ. ಈ ವೀಡಿಯೊ ವೈರಲ್ ಆಗಿ ವಿವಾದಕ್ಕೊಳಗಾಗುತ್ತಿರುವಂತೆ ತಲೆಮರೆಸಿಕೊಂಡಿದ್ದ. ರಾಜಸ್ಥಾನ ಪೊಲೀಸರು ನಿನ್ನೆ ರಾತ್ರಿ ಅವನನ್ನು ಬಂಧಿಸಿದ್ದಾರೆ.