ವಿಟ್ಲ: ನಿನ್ನೆಯಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ವಿಟ್ಲ ಸಮೀಪ ಸಾರಡ್ಕದಲ್ಲಿ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ಗುಡ್ಡ ಕುಸಿದಿದ್ದು, ಪರಿಣಾಮವಾಗಿ ಕೇರಳ- ಕರ್ನಾಟಕ ನಡುವಿನ ಸಂಪರ್ಕ ಬಂದ್ ಆಗಿದೆ.
ರಸ್ತೆಯಲ್ಲಿ ಕಲ್ಲು,ಮಣ್ಣು ಗಿಡಮರಗಳು ತುಂಬಿದ್ದು, ಬದಿಯಡ್ಕ, ಪೆರ್ಲ, ಕಾಸರಗೋಡು ಮತ್ತಿತರೆಡೆಗೆ ಹೋಗುವವರು ಸುತ್ತುಬಳಕೆಯ ಮಾರ್ಗವನ್ನು ಅವಲಂಬಿಸಬೇಕಾಗಿದೆ.