ಉಡುಪಿ ಇನ್ನಂಜೆಯ ಸಿನಿ ಶೆಟ್ಟಿಗೆ ಮಿಸ್‌ ಇಂಡಿಯ ಕಿರೀಟ

ಮುಂಬಯಿ: ಉಡುಪಿ ಮೂಲದ ಸಿನಿ ಶೆಟ್ಟಿ ಪ್ರತಿಷ್ಠಿತ ಮಿಸ್‌ ಇಂಡಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಮುಂಬಯಿಯ ಜಿಯೋ ಕನ್ವೆನ್ಶನ್‌ ಸೆಂಟರ್‌ನಲ್ಲಿ ಭಾನುವಾರ ರಾತ್ರಿ ನಡೆದ ಸೌಂರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಉಡುಪಿ ಸಮೀಪದ ಇನ್ನಂಜೆಯ ಸಿನಿ ಶೆಟ್ಟಿ ವಿಜೇತರಾಗಿದ್ದಾರೆ. 2022ನೇ ಸಾಲಿನ ಮಿಸ್‌ ಇಂಡಿಯಾ ಆಗಿರುವ ಸಿನೆ ಶೆಟ್ಟಿ ಅವರಿಗೆ 2020ನೇ ಸಾಲಿನ ಮಿಸ್‌ ಇಂಡಿಯಾ ತೆಲಂಗಾಣದ ಮಾನಸಾ ವಾರಣಾಶಿ ಕಿರೀಟ ತೊಡಿಸಿದರು.
ಸಿನಿ ಶೆಟ್ಟಿ ಮುಂಬಯಿಯಲ್ಲಿ ಹುಟ್ಟಿ ಬೆಳೆದಿದ್ದರೂ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಇದು ಕರ್ನಾಟಕಕ್ಕೆ ದಕ್ಕಿದ ಸೌಂರ್ಯ ಕಿರೀಟ. ಚಾರ್ಟರ್ಡ್‌ ಫೈನಾನ್ಶಿಯಲ್‌ ಅನಾಲಿಸ್ಟ್‌ ಕೋರ್ಸ್‌ ಮಾಡುತ್ತಿರುವ ಸಿನಿ ಶೆಟ್ಟಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರಾಜಸ್ಥಾನದ ರೂಬಲ್‌ ಶೆಖಾವತ್‌ ಪ್ರಥಮ ರನ್ನರ್‌ ಅಪ್‌ ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ ಎರಡನೇ ರನ್ನರ್‌ ಅಪ್‌ ಆಗಿದ್ದಾರೆ.









































































































































































error: Content is protected !!
Scroll to Top