ಹಿಮಾಲಯದಲ್ಲಿ ಬೆಂಗಳೂರಿನ ವೈದ್ಯ ನಿಗೂಢ ನಾಪತ್ತೆ

ಬೆಂಗಳೂರು: ಹಿಮಾಲಯ ಚಾರಣಕ್ಕೆಂದು ಒಂಟಿಯಾಗಿ ಹೋಗಿದ್ದ ಬೆಂಗಳೂರಿನ ಯುವ ವೈದ್ಯರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ವಸಂತನಗರ ನಿವಾಸಿ , ಖಾಸಗಿ ಅಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಚಂದ್ರಮೋಹನ್‌ ನಾಪತ್ತೆಯಾದವರು. ನೇಪಾಳ ಪೊಲೀಸರಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ. ಚಂದ್ರಮೋಹನ್‌ ಪೋಷಕರು ಹಾಗೂ ಸಹೋದರ ಮಗನನ್ನು ಹುಡುಕಿಕೊಂಡು ನೇಪಾಳಕ್ಕೆ ಹೋಗಿದ್ದಾರೆ.
ಬೆಂಗಳೂರಿನಿಂದ ಕಾಠ್ಮಂಡುಗೆ ಮೇ 3ರಂದು ಪ್ರಯಾಣಿಸಿದ್ದರು. ಕೆಲ ದಿನ ನೇಪಾಳದದಲ್ಲಿದ್ದು ತಿರುಗಾಡಿದ್ದರು. ಈ ಫೊಟೊಗಳನ್ನು ಅವರು ಹಂಚಿಕೊಂಡಿದ್ದರು. ಬಳಿಕ ಚಂದ್ರಮೋಹನ್‌ ಅವರ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ. ತಂದೆ ಶಿವನಾಥ್‌ ಆತಂಕಿತರಾಗಿ ದೂರು ದಾಖಲಿಸಿದ್ದಾರೆ.
ವೈದ್ಯರಾಗಿದ್ದರೂ ಚಂದ್ರಮೋಹನ್‌ ಧಾರ್ಮಿಕ ಪ್ರವೃತ್ತಿಯವರು ಮತ್ತು ಅಪಾರ ದೈವಭಕ್ತ. ವೈದ್ಯರಾಗಿ ಉತ್ತಮ ಹೆಸರು ಸಂಪಾದಿಸಿದ್ದ ಅವರು ದೇವರ ಮೇಲಿನ ಭಕ್ತಿಯಿಂದ ಒಂಟಿಯಾಗಿ ಹಿಮಾಲಯ ಪ್ರವಾಸ ಕೈಗೊಳ್ಳಬೇಕೆಂದು ಆಗಾಗ ಹೇಳುತ್ತಿದ್ದರು. ಹೀಗೆ ಹೀದಾಗ ಮೊಬೈಲ್‌ ಸ್ವಿಚ್‌ಆಫ್‌ ಆಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.









































































































































































error: Content is protected !!
Scroll to Top