ಹೆಬ್ರಿ : ವರಂಗ ಗ್ರಾಮದ ಬೈದಡಪು ಹೊಳೆ ದಡದಲ್ಲಿ ನಿಂತು ಮೀನು ಹಿಡಿಯುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಸಾವಿಗೀಡಾದ ಘಟನೆ ಮೇ 12ರಂದು ಸಂಭವಿಸಿದೆ. ಶ್ರೀಧರ ಪೂಜಾರಿ (69) ಎಂಬವರು ಗುರುವಾರ ಸಂಜೆ ಹೊಳೆಗೆ ಬಲೆಯನ್ನು ಹಾಕಿ ಮೀನು ಹಿಡಿಯುತ್ತಿರುವಾಗ ಕಾಲು ಜಾರಿ ಬಿದ್ದು, ಹೊಳೆಯ ಕೆಸರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಆಗದೇ ಮೃತಪಟ್ಟಿರುತ್ತಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕೆದಿಂಜೆ : ಬೈಕ್ಗೆ ಕಾರು ಡಿಕ್ಕಿ
ಕಾರ್ಕಳ : ಕಾರ್ಕಳದಿಂದ ಬೆಳ್ಮಣ್ ಕಡೆಗೆ ಸಾಗುತ್ತಿದ್ದ ಕಾರು ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ಬೈಕ್ ಮಧ್ಯೆ ಕೆದಿಂಜೆ ದುರ್ಗಾ ಫ್ಯೂಲ್ ಪೆಟ್ರೋಲ್ ಬಂಕ್ ಸಮೀಪ ಮೇ 12ರಂದು ಅಪಘಾತ ಸಂಭವಿಸಿದೆ. ಪರಿಣಾಮ ಸವಾರ ಗುರುರಾಜ ಆಚಾರಿ ರಸ್ತೆಗೆ ಬಿದ್ದು ಮುಖ, ಮೊಣಗಂಟು ಹಾಗೂ ಬಲಕೈಗೆ ತೀವ್ರ ಸ್ವರೂಪದ ಗಾಯವಾಗಿದೆ. ಕಾರ್ಕಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.