ಹಾಸು ಕಲ್ಲಿಗೆ ಹೊಡೆದ ಬೈಕ್ – ಸವಾರರಿಗೆ ಗಾಯ

ಅಜೆಕಾರು : ಬೈಕ್‌ ಸವಾರನ ಅಜಾಗರೂಕತೆಯಿಂದ ಬೈಕ್‌ ಹಾಸುಗಲ್ಲಿಗೆ ಡಿಕ್ಕಿಯಾಗಿ ಸವಾರರಿಬ್ಬರೂ ರಸ್ತೆಗೆ ಬಿದ್ದ ಘಟನೆ ಮೇ. 9ರಂದು ಕಡ್ತಲ ಬಸ್‌ ನಿಲ್ದಾಣದ ಬಳಿ ನಡೆದಿದೆ. ಪರಿಣಾಮ ಬೈಕ್‌ ಸವಾರರು ಗಾಯಗೊಂಡಿರುತ್ತಾರೆ.
ಸವಾರ ಸುಧಾಕರ ಮತ್ತು ಸಹಸವಾರ ಶ್ರೀನಿವಾಸ್‌ ಕುಲಾಲ್‌ ಕಡ್ತಲಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ತೋಡಿಗೆ ಹಾಸಿರುವ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಎಸೆಯಲ್ಪಟ್ಟ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































































































error: Content is protected !!
Scroll to Top