ಕುಕ್ಕುಂದೂರು : ಗ್ರಾಮದ ಪರಪ್ಪು ನಾಗಸ್ಥಾನದಲ್ಲಿ ಮೇ. 7 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಶ್ರೀ ವೇ.ಮೂ. ಶಂಕರನಾರಾಯಣ ಭಟ್ರ ನೇತೃತ್ವದಲ್ಲಿ ಅಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ ಹೋಮ, ಮಧ್ಯಾಹ್ನ 12 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿರುವುದು ಎಂದು ಅಶ್ವತ್ಥಕಟ್ಟೆ ಸೇವಾ ಸಮಿತಿಯ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.