ಎ. 19 – 27 : ಗಾಂಧಿಮೈದಾನ ಆದಿಶಕ್ತಿ ವೀರಭದ್ರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ‌

ಕಾರ್ಕಳ : ಗಾಂಧಿಮೈದಾನದ ಬಳಿಯ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ವೀರಭದ್ರ ದೇವರ, ಶ್ರೀ ಮಹಾಕಾಳಿ ಅಮ್ಮನವರ ಪುನರ್‌ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ನಾಗಬ್ರಹ್ಮಸ್ಥಾನದ ಪುನರ್‌ ಪ್ರತಿಷ್ಠೆ – ವಾರ್ಷಿಕ ಉತ್ಸವ ಮತ್ತು ನೇಮೋತ್ಸವ ಎ. 19ರಿಂದ 27ರವರೆಗೆ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 19ರಂದು ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಸಂಜೆ 4 ಗಂಟೆಗೆ ಹಸಿರು ಹೊರೆಕಾಣಿಕೆ ಜರುಗಲಿದೆ. ಎ. 20ರ ಬೆಳಗ್ಗೆ 8 ಗಂಟೆಗೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ ತೋರಣ ಮುಹೂರ್ತ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ
ಎ. 25ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಜನಾರ್ಧನ ಶೆಟ್ಟಿಗಾರ್‌ ಅ‍‍ಧ್ಯಕ್ಷತೆ ವಹಿಸಲಿದ್ದಾರೆ. ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಶ್ರೀರಾಮ ಭಟ್‌ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌, ಕಾರ್ಕಳ ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು, ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ, ಎಸೋಸಿಯೇಟ್‌ ಪ್ರೊಫೆಸರ್‌ ಡಾ. ಕುಸುಮ ಪುರುಷೋತ್ತಮ ಮಂಗಳೂರು, ಪುರಸಭೆ ಅ‍ಧ್ಯಕ್ಷೆ ಸುಮಾ ಕೇಶವ್‌, ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಪದ್ಮಶಾಲಿ ಜಿಲ್ಲಾ ಸಂಘದ ಅಧ್ಯಕ್ಷ ಜಯರಾಮ್‌ ಶೆಟ್ಟಿಗಾರ್‌, ನಿವೃತ್ತ ಎ.ಜಿ.ಎಮ್‌, ಎಸ್.ಬಿ.ಐ ವಿದ್ಯಾಧರ ಶೆಟ್ಟಿಗಾರ್‌, ವಿದ್ಯಾವರ್ಧಕ ಸಂಘದ ಓಂಪ್ರಕಾಶ್‌ ಶೆಟ್ಟಿಗಾರ್, ಸೇವಾ ಸಮಿತಿಯ ಅಧ್ಯಕ್ಷ ಶಿವರಾಯ ಶೆಟ್ಟಿಗಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಾಂಡುರಂಗ ಶೆಟ್ಟಿಗಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ದೇವಕಿ ಶೆಟ್ಟಿಗಾರ್‌, ಪುರಸಭಾ ಸದಸ್ಯೆ ಪ್ರಭಾ ಕಿಶೋರ್‌ ಶೆಟ್ಟಿಗಾರ್‌, ರವಿ‌ ಶೆಟ್ಟಿಗಾರ್ ಹಾಗೂ ವಿವಿಧ ದೇವಸ್ಥಾನದ ಮೊಕ್ತೇಸರರು ಉಪಸ್ಥಿತಲಿರುವರು.

ಎ. 26ರಂದು ಬೆಳಗ್ಗೆ 8.30ರಿಂದ ಸಂಜೆ 5ರ ವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ. ಸಂಜೆ 6.30ಕ್ಕೆ ಹೂವಿನ ಪೂಜೆ, ಪರಿವಾರ ಪೂಜೆ, ದೈವಗಳ ಭಂಡಾರ ಹೊರಡುವುದು. ರಾತ್ರಿ 8 ಗಂಟೆಯಿಂದ ಅನ್ನಸಂತರ್ಪಣೆ, 9 ರಿಂದ ಅಣ್ಣಪ್ಪ ಪಂಜುರ್ಲಿ, ವ್ಯಾಘ್ರಚಾಮುಂಡಿ, ಕಲ್ಕುಡ, ಬೊಬ್ಬರ್ಯ, ಗುಳಿಗ ಚಾಮುಂಡಿ ದೈವಗಳ ನೇಮ, ನಂಬಿಕೆ ಪ್ರಸಾದ.
ಎ. 27 ರಂದು ಮಹಾಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಎ. 23ರಂದು ಸಂಜೆ 6 ಗಂಟೆಯಿಂದ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮ, ಎ. 24ರಂದು ಸಂಜೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮುಲ್ಕಿ ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡ ವತಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.













































error: Content is protected !!
Scroll to Top