ಕಾರ್ಕಳ : ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಪಡುಬಿದ್ರಿಯಿಂದ ಶೃಂಗೇರಿ ತೆರಳುವ ಸಂದರ್ಭ ಕಾರ್ಕಳ ಪುಲ್ಕೇರಿ ಬೈಪಾಸ್ ಬಳಿ ರಾಮ ಕ್ಷತ್ರಿಯ ಹಾಗೂ ಕ್ಷತ್ರಿಯ ಮರಾಠ ಸಮಾಜಬಾಂಧವರು ಸ್ವಾಮೀಜಿಯವರು ಸ್ವಾಗತಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ತಾಲೂಕು ಅಧ್ಯಕ್ಷ ಕೆ.ಬಿ. ಕೀರ್ತನ್ ಕುಮಾರ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ನಾಮನಿರ್ದೇಶಿತ ಸದಸ್ಯ ಸಂತೋಷ್ ರಾವ್, ರಾಮನಾಥ್ ರಾವ್, ಸಮಾಜದ ಹಿರಿಯರಾದ ಭಾಸ್ಕರ್ ರಾವ್, ಸುಮಿತ್ರಾ, ಪಲ್ಲವಿ ಕೀರ್ತನ್, ಅಕ್ಷಯ್ ರಾವ್, ಅಂಬಾ ಪ್ರಸಾದ್, ಪ್ರಸನ್ನ ಕೆ.ವಿ., ಪಾರ್ಥಸಾರಥಿ, ಸಂಪತ್, ದಿನೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.