ಕುಕ್ಕುಂದೂರು : ಹಣ ತೆಗೆದುಕೊಂಡು ಹೋದ ವ್ಯಕ್ತಿ ನಾಪತ್ತೆಯಾದ ಘಟನೆ ಎ. 3ರಂದು ಕುಕುಂದೂರು ಗ್ರಾಮದ ಜಯಂತಿ ನಗರ ಎಂಬಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ನಾಗರಾಜ ಪ್ರಭು (37) ಎಂದು ಗುರುತಿಸಲಾಗಿದೆ. ಅವಿವಾಹಿತರಾದ ಅವರು ಎ. 3 ರಂದು ತಂದೆಯಲ್ಲಿ ಹಣ ಕೇಳಿದ್ದು, ತಂದೆ ಹಣ ನೀಡಿಲ್ಲ. ಎ. 4 ರಂದು ಮಧ್ಯಾಹ್ನ ಹಣ ತೆಗೆದುಕೊಂಡು ಮನೆಯಿಂದ ಮೋಟರ್ ಸೈಕಲ್ ನಲ್ಲಿ ಹೊರಟು, ತಂದೆಯ ಅಕ್ಕನ ಮನೆಯಲ್ಲಿ ಕೀ ಮತ್ತು ಮೋಟರ್ ಸೈಕಲ್ ಇರಿಸಿದ್ದಾರೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ : ದೂರು ದಾಖಲು
Recent Comments
ಕಗ್ಗದ ಸಂದೇಶ
on