ನಿಟ್ಟೆ : ಉದ್ದಿಮೆಗಳು ಸಾಕಷ್ಟು ಸವಾಲುಗಳನ್ನು ಒಳಗೊಂಡಿದ್ದರೂ, ಇಂದಿನ ಪರಿಸ್ಥಿತಿಯಲ್ಲಿ ದೇಶದ ಹಾಗೂ ಸ್ವ ಅಭಿವೃದ್ಧಿಗೆ ಅನಿವಾರ್ಯ ಎಂದು ನಿಟ್ಟೆ ಡೀಮ್ಡ್ ವಿವಿಯ ಪ್ರೊ ಛಾನ್ಸಲರ್ ವಿಶಾಲ್ ಹೆಗ್ಡೆ ನುಡಿದರು.
ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಕೆ. ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ ಆಶ್ರಯದಲ್ಲಿ ನಡೆಯುವ 4 ದಿನಗಳ ಕಾರ್ಯಾಗಾರ “ದಿಶಾ 2022″ನ್ನು ಉದ್ಘಾಟಿಸಿ ಮಾತನಾಡಿದ ಅವರು, ಮ್ಯಾನೆಜ್ಮೆಂಟ್ ಸಂಸ್ಥೆಯ ಸಂಪನ್ಮೂಲ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪರಿಣಿತರು ಸೇರಿ ಕುಟುಂಬ ಯೋಜನೆ ಉದ್ದಿಮೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿದೆ, ಆದರೆ ಅದು ಕಷ್ಟ ಸಾಧ್ಯವಾದುದು ಎಂದರು.
ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ನ ಮುಖ್ಯಸ್ಥ ಕೆ. ಉಲ್ಲಾಸ್ ಕಾಮತ್ ಮಾತನಾಡಿ, ಅನ್ನದಾನ ಮತ್ತು ವಿದ್ಯಾದಾನ ಎರಡೂ ಬಹು ಪ್ರಾಮುಖ್ಯ ದಾನಗಳು. ಅನ್ನದಾನವು ಮನುಷ್ಯನ ಹೊಟ್ಟೆ ತುಂಬುವುದರೊಂದಿಗೆ ಸಂತೃಪ್ತಿ ನೀಡಿದರೆ, ವಿದ್ಯಾದಾನ ಎಷ್ಟು ಕೊಟ್ಟರೂ ಕಡಿಮೆಯಾಗುವುದಿಲ್ಲ. ಬದಲಾಗಿ ಪುನಃ ನಮಗೆ ಹೆಚ್ಚಿನ ಜ್ಞಾನ ದೊರೆಯುತ್ತದೆ. ವ್ಯವಹಾರ ಜ್ಞಾನ ಹೆಚ್ಚಾದಂತೆ ವ್ಯಾಪಾರ- ವ್ಯವಹಾರಗಳಲ್ಲಿ ಉತ್ಕೃಷ್ಟತೆ ಹೊಂದಲು ಸಾದ್ಯ. ನನಗೆ ಎಲ್ಲವೂ ತಿಳಿದಿದೆ ಕಲಿಯಲಿಕ್ಕೆ ಏನೂ ಇಲ್ಲ ಅದರ ಅಗತ್ಯ ನಮಗಿಲ್ಲ ಎಂಬ ಭಂಡ ಜಂಭ ಹಾಗೂ ಅತಿಯಾದ ಆತ್ಮ ವಿಶ್ವಾಸದಿಂದ ಇಂದು ಉದ್ಯಮಗಳು ನೆಲಕಚ್ಚುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ. ಕೆ. ಶಂಕರನ್, ಪ್ರೊ. ಸುಧೀರ್ ರಾಜ್, ಕೆ. ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ ಲಕ್ಷ್ಮೀ ನಾರಾಯಣ, ಸಿದ್ಧಾರ್ಥ್ ಪೈ ಉಪಸ್ಥಿತರಿದ್ದರು.
ದೇಶದ ಅಭಿವೃದ್ಧಿಗೆ ಉದ್ದಿಮೆಗಳು ಅನಿವಾರ್ಯ : ವಿಶಾಲ್ ಹೆಗ್ಡೆ
Recent Comments
ಕಗ್ಗದ ಸಂದೇಶ
on