ಮುಂಬೈ: ವಾಖೆಂಡೆ ಕ್ರೀಡಾಂಗಣದಲ್ಲಿ ಮಾ. 26ರಂದು ನಡೆದ ಐಪಿಎಲ್ 2022 ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಕೆಕೆಆರ್ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ತಂಡ ಐದು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಸಿಎಸ್ ಕೆ ಪರ ಮಹೇಂದ್ರ ಸಿಂಗ್ ಧೋನಿ ಆಕರ್ಷಕ ಅರ್ಧಶತಕ, ರಾಬಿನ್ ಉತ್ತಪ್ಪ 28, ಹಾಗೂ ರವೀಂದ್ರ ಜಡೇಜಾ, 26 ರನ್ ಗಳಿಸಿದರು. ಕೆಕೆಆರ್ ಪರ ಉಮೇಶ್ ಯಾದವ್ 2, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಕಬಳಿಸಿದರು.
ಸಿಎಸ್ ಕೆ ನೀಡಿದ ಅಲ್ಪ ಗುರಿ ಬೆನ್ನಟ್ಟಿದ್ದ ಕೆಕೆಆರ್ ತಂಡ, 18.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿತು. ಅಜಿಂಕ್ಯ ರಹಾನೆ 44, ಸ್ಯಾಮ್ ಬಿಲ್ಲಿಂಗ್ಸ್ 25, ನಿತೀಶ್ ರಾಣಾ 21 ರನ್ ಗಳಿಸಿದರು. ಅಂತಿಮ ಹಂತದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಸುಲಭ ಗೆಲುವು ದಾಖಲಿಸುವಲ್ಲಿ ನೆರವಾದರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ 20 ರನ್ ಗಳಿಸಿ ಔಟಾಗದೆ ಉಳಿದರು. ಸಿಎಸ್ ಕೆ ಪರ ಡ್ವೇನ್ ಬ್ರಾವೊ 3, ಮಿಚೆಲ್ ಸಾಂಟ್ನರ್ 1 ವಿಕೆಟ್ ಪಡೆದರು.
ಐಪಿಎಲ್ 2022 : ಹಾಲಿ ಚಾಂಪಿಯನ್ಸ್ ಸಿಎಸ್ ಕೆ ವಿರುದ್ಧ ಕೆಕೆಆರ್ ಗೆಲುವು
Recent Comments
ಕಗ್ಗದ ಸಂದೇಶ
on