ಕಾರು ಅಪಘಾತ – ನಾಲ್ವರಿಗೆ ಗಾಯ

ಹೆಬ್ರಿ : ಕಾರು ಅಪಘಾತವಾಗಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಹೆಬ್ರಿ ಗ್ರಾಮದ ಕೊಳ್ಳಗುಡ್ಡೆ ಕ್ರಾಸ್ ಬಳಿ ಮಾ. 26ರಂದು ಸಂಭವಿಸಿದೆ. ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಚಾಲಕ ಹನುಮಾನ್‌ ತನ್ನ ಕಾರನ್ನು ಎಡಕ್ಕೆ ತಿರುಗಿಸಿರುತ್ತಾನೆ. ಈ ವೇಳೆ ಹತೋಟಿ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಇಕೋ ಕಾರಿಗೆ ಡಿಕ್ಕಿಯಾಗಿ, ರಸ್ತೆಯ ಬಲಬದಿಯಲ್ಲಿದ್ದ ಚರಂಡಿ ಬಳಿ ನಿಂತಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಸಹಿತ ಸುಬಾಶ್ಚಂದ್ರ ಶೆಟ್ಟಿ, ನಾಗೇಂದ್ರಪ್ಪ, ಎ.ಬಿ. ಪಾಟೀಲ್ ಗಾಯಗೊಂಡಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































































































error: Content is protected !!
Scroll to Top