ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಭಜನಾ ಸೇವಾ ಸಮಿತಿ ವತಿಯಿಂದ ಮಾ. 26 ರಂದು ಸಂಜೆ ಗಂಟೆ 4.00 ಕ್ಕೆ ಲೋಕ ಕಲ್ಯಾಣಾರ್ಥವಾಗಿ ದೇವಸ್ಥಾನದ ಪ್ರಧಾನ ಅರ್ಚಕ ವಿಠಲ ಪುರೋಹಿತರ ಸಾರಥ್ಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆಯು ಜರುಗಲಿರುವುದು. ಸಾಯಂಕಾಲ ಗಂಟೆ 6.00 ರಿಂದ ಧಾರ್ಮಿಕ ಸಭೆಯು ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಮಠ ಸರಸ್ವತಿ ಪೀಠಾಧೀಶರಾದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ ವಹಿಸಲಿದ್ದು, ವೇ.ಮೂ. ಬ್ರಹ್ಮಶ್ರೀ ಉಮೇಶ್ ತಂತ್ರಿ, ಪಿ. ರವಿ ಆಚಾರ್, ನಿಟ್ಟೆ ಸುರೇಶ್ ಆಚಾರ್ಯ, ಅಂಡಾರ್ ಅಶೋಕ್ ಆಚಾರ್ಯ ಉಪಸ್ಥಿತರಿರುವರು.