ಕಾರ್ಕಳ : ಕಾರ್ಕಳ ಉತ್ಸವದ ಆಮಂತ್ರಣ ಪತ್ರಿಕೆ ವಿತರಣೆಗೆ ವಿಕಾಸ ಕಚೇರಿಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಕಾರ್ಕಳ ಹೆಬ್ರಿ ತಾಲೂಕಿನ ಪ್ರತಿ ಮನೆಗೆ ಅಂದರೆ 48 ಸಾವಿರ ಕುಟುಂಬಗಳಿಗೂ ಆಮಂತ್ರಣ ಪತ್ರಿಕೆ ನೀಡುವ ನಿಟ್ಟಿನಲ್ಲಿ ಪಂಚಾಯತ್ವಾರು ಹಂಚಿಕೆ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಳೆದ 5 ದಿನಗಳಿಂದ ಕಾರ್ಯಾಲಯ ವಿಭಾಗದ ಸುಮಾರು 50 ಮಂದಿ ಸಿಬ್ಬಂದಿ ಆಮಂತ್ರಣ ಪತ್ರಿಕೆ ಜೋಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ತಾಲೂಕು, ಹೊರ ಜಿಲ್ಲೆ, ಹೊರ ರಾಜ್ಯದಲ್ಲಿರುವ ಗಣ್ಯರು, ಸ್ನೇಹಿತರಿಗೂ ಅಂಚೆ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿಕೊಡುವ ಕಾರ್ಯ ಭರದಿಂದ ಸಾಗುತ್ತಿದೆ.
