ಕೇವ್: ಭಾರತದ ತ್ರಿವರ್ಣಧ್ವಜವು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದಿಂದ ಹೊರಬರಲು ರಕ್ಷಣೆ ನೀಡಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ತಮ್ಮ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಇರಿಸುವಂತೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಈ ಹಿಂದೆ ಸಲಹೆ ನೀಡಿದ್ದರು.
ಉಕ್ರೇನ್ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು ವಿವಿಧ ಚೆಕ್ಪೋಸ್ಟ್ಗಳನ್ನು ಸುರಕ್ಷಿತವಾಗಿ ದಾಟಲು ಭಾರತದ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ ಎಂದು ಹೇಳಿದರು.
ದಕ್ಷಿಣ ಉಕ್ರೇನ್ನ ಒಡೆಸಾದಿಂದ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು “ಭಾರತೀಯ ಧ್ವಜವನ್ನು ನಮ್ಮೊಂದಿಗೆ ಕೊಂಡೊಯ್ದರೆ ನಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉಕ್ರೇನ್ನಲ್ಲಿ ನಮಗೆ ತಿಳಿಸಿದ್ದರು ಎಂದು ಹೇಳಿದರು. ಮಾರುಕಟ್ಟೆಯಿಂದ ಪರದೆ ಮತ್ತು ಸ್ಪ್ರೇ ಪೈಂಟ್ ಖರೀದಿಸಿ ಅದರ ಮುಖಾಂತರ ಭಾರತೀಯ ಧ್ವಜವನ್ನು ಸ್ವತಃ ವಿದ್ಯಾರ್ಥಿಗಳೇ ತಯಾರಿಸಿದ್ದಾರೆ.
ಉಕ್ರೇನ್ನಿಂದ ಹೊರಬರಲು ಭಾರತದ ಧ್ವಜ ಬಳಸಿದ ಪಾಕ್, ಟರ್ಕಿಶ್ ವಿದ್ಯಾರ್ಥಿಗಳು
Recent Comments
ಕಗ್ಗದ ಸಂದೇಶ
on