ಕಾರ್ಕಳ : ಕಾರ್ಕಳ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಪ್ರದೀಪ್ ಕುರುಡೇಕರ್ ಎಸ್. ನೇಮಕಗೊಂಡಿದ್ದಾರೆ. ಈ ಕುರಿತು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್. ಮಾ. 3ರಂದು ಆದೇಶ ಹೊರಡಿಸಿರುತ್ತಾರೆ. ಮೂಲತಃ ಗೋಕರ್ಣದವರಾಗಿರುವ ಪ್ರದೀಪ್ ಅವರು 2005ರಲ್ಲಿ ಕಂದಾಯ ನಿರೀಕ್ಷಕರಾಗಿ ಆಯ್ಕೆಯಾಗಿದ್ದರು. ದಾವಣಗೆರೆ, ತೀರ್ಥಹಳ್ಳಿ, ಶೃಂಗೇರಿಯಲ್ಲಿ ತಹಶೀಲ್ದಾರ್ ಆಗಿದ್ದ ಪ್ರದೀಪ್ ಅವರು ಕಳೆದ 4 ವರ್ಷಗಳಿಂದ ಉಡುಪಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.
Recent Comments
ಕಗ್ಗದ ಸಂದೇಶ
on