ಕಾರ್ಕಳ : ಪಂಚಾಯತ್ ಸದಸ್ಯರೇ ಗ್ರಾಮ ಪಂಚಾಯತ್ನ ಕಡತಗಳನ್ನು ಕದ್ದ ಘಟನೆ ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ನಡೆದಿದ್ದು, ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಫೆ. 17ರಂದು ಶಿರ್ಲಾಲು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ಚರ್ಚೆಗೆ ಇಡಲಾಗಿದ್ದ ಮುಂಡ್ಲಿ ಜಿವಿಪಿ ಇಂಪ್ರಪ್ರೈವೆಟ್ ಲಿಮಿಟೆಡ್ ಗೆ (ಜಲವಿದ್ಯುತ್ ಸ್ಥಾವರ) ಸಂಬಂಧಿಸಿದ ಕಡತವನ್ನು ಗ್ರಾ.ಪಂ. ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುಜಿತ್ ಕುಮಾರ್ ಶೆಟ್ಟಿ, ಕಿಶೋರ್ ಹಾಗೂ ಗಿರೀಶ್ ಶೆಟ್ಟಿ ಅವರು ಕಡತಗಳನ್ನು ಪರಿಶೀಲಿಸುತ್ತಾ ಕೈ ಚೀಲದಲ್ಲಿ ತುಂಬಿಸಿಕೊಂಡು ಹೋಗಿರುತ್ತಾರೆ. ಪಂಚಾಯತ್ ಗೆ ಹಾಗೂ ಪ್ರೊಜೆಕ್ಟ್ ನವರಿಗೆ ತೊಂದರೆ ಕೊಡುವ ಉದ್ದೇಶದಿಂದ ದಾಖಲೆಯನ್ನು ಕಳವು ಮಾಡಿರುವುದಾಗಿ ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ಅಜೆಕಾರು ಪೊಲೀಸ್ ಠಾಣೆಗೆ ಫೆ. 25ರಂದು ದೂರು ನೀಡಿದ್ದು, ಕಳವು ಪ್ರಕರಣ ದಾಖಲಾಗಿದ್ದೆ. ಕಳ್ಳತನದ ದೃಶ್ಯವಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.