ಕಾರ್ಕಳ: ಕಾರ್ಕಳ ಬಂಡಿಮಠ ಬಸ್ ನಿಲ್ದಾಣಕ್ಕೆ ಹೋಗಲು ವಿನಾಯಿತಿ ಇರುವ ಬಸ್ಸುಗಳನ್ನು ಹೊರತು ಪಡಿಸಿ ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಸ್ಸುನಿಲ್ದಾಣದಲ್ಲಿ ಪ್ರವೇಶಿಸಿ ಮುಂದುವರೆಯುವಂತೆ ಬಸ್ಸು ಮಾಲಿಕರಿಗೆ ಜಿಲ್ಲಾಧಿಕಾರಿ ಫೆ.19ರಂದು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪಿ. ಗಂಗಾದರ ಅವರು ಆದೇಶ ಪಾಲನೆ ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.