ಉಸ್ತುವಾರಿ ಸಚಿವ ಹೊಣೆಗಾರಿಕೆಯಲ್ಲಿ ಯಾರೂ ಅಸಮಾಧಾನಗೊಂಡಿಲ್ಲ, ಎಲ್ಲರ ಜೊತೆ ಚರ್ಚಿಸಿಯೇ ನಿರ್ಧಾರಕ್ಕೆ ಬರಲಾಗಿದೆ:  ಬಸವರಾಜ ಬೊಮ್ಮಾಯಿ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸಿರುವುದರಲ್ಲಿ ಯಾವ ಸಚಿವರುಗಳಿಗೂ ಅಸಮಾಧಾನವಿಲ್ಲ, ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ, ಎಲ್ಲರ ಜೊತೆ ನಾನು ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯನೀತಿಯಡಿಯಲ್ಲಿ ಹೈಕಮಾಂಡ್ ಮತ್ತು ಎಲ್ಲರ ಜೊತೆ ಚರ್ಚಿಸಿ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ವಹಿಸಲಾಗಿದೆ. ಇದು ತಮ್ಮ ನಿರ್ಧಾರವಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ದೆಹಲಿಯತ್ತ ಬೊಟ್ಟು ಮಾಡಿ ತೋರಿಸಿದ್ದಾರೆ.

ಎಲ್ಲ ಸಚಿವರ ಬಳಿಯೂ ನಾನು ಮಾತನಾಡಿದ್ದೇನೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿದ್ದೇವೆ. ಸರ್ಕಾರದ ಪರವಾಗಿ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಗೊಂದಲ, ಅಸಮಾಧಾನ ಎಂಬ ಸುದ್ದಿಗಳೆಲ್ಲ ವಾಸ್ತವಕ್ಕೆ ದೂರ ಎಂದು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.





























































































































































































































error: Content is protected !!
Scroll to Top