ಕಾರ್ಕಳ : ಹಣದ ವಿಚಾರಕ್ಕೆ ಸಂಬಂಧಿಸಿ ಪತ್ನಿಯಿಂದ ಪತಿಗೆ ಕಿರುಕುಳ – ಪತಿ ಆತ್ಮಹತ್ಯ

ಕಾರ್ಕಳ : ಗಂಡ ಹೆಂಡತಿ ಮಧ್ಯೆ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗುತ್ತಿದ್ದು ಇದೇ ಕಾರಣದಿಂದ ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಬೆಳ್ಮಣ್‌ ನಿಂದ ವರದಿಯಾಗಿದೆ. ಬೆಳ್ಮಣ್‌ ಗ್ರಾಮದ ಪವಿತ್ರನಗರ ನಿವಾಸಿ ಲೊರೆನ್ಸ್ ರೋಶನ್ ಲೋಬೋ (35) ಎಂಬವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರೋಶನ್ ಎರಡನೇ ಪತ್ನಿ ರಾಣಿ ಸುನಿಲ್ ದಾಸ್ ಹಾಗೂ 7 ತಿಂಗಳ ಮಗುವಿನೊಂದಿಗೆ ಪವಿತ್ರನಗರ ಎಂಬಲ್ಲಿ ವಾಸವಾಗಿದ್ದು, ಗಂಡ ಹೆಂಡತಿಯ ನಡುವೆ ಹಣದ ವಿಚಾರದಲ್ಲಿ ವೈಮನಸ್ಸಿದ್ದು, ಸುನಿಲ್‌ ದಾಸ್‌ ರೋಶನ್ ಲೋಬೋರವರಿಗೆ ಕಿರುಕುಳ ಕೊಡುತ್ತಿದ್ದರು. ಅದೇ ಕಾರಣದಿಂದ ಮನನೊಂದ ರೋಶನ್ ಜ. 13ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರೋಶನ್‌ ಅವರ ತಂಗಿ ರೇಶ್ಮಾ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





























































































































































































































error: Content is protected !!
Scroll to Top