ಕಾರ್ಕಳ : ಹಿಂದೂ ದೈವ ದೇವರುಗಳ ಕುರಿತು ಅವಹೇಳನ, ಅಪಹಾಸ್ಯಗೈದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವವರ, ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿರುವವರ ವಿರುದ್ಧ ವಿಶ್ವ ಹಿಂದೂ ಪರಿಪತ್ ನೇತೃತ್ವದಲ್ಲಿ ಈದು ಅಲಿಮಾರುಗುಡ್ಡೆ ಬ್ರಹ್ಮಮುಗೇರ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಜ. 11ರಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಪ್ರಾಂತ ಬಜರಂಗದಳ ಸಂಚಾಲಕ ಸುನೀಲ್ ಕೆ. ಆರ್., ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.