ಕಾರ್ಕಳ : ಆಕಸ್ಮಿಕವಾಗಿ ನಾಗರಬಾವಿ ಕೆರೆಗೆ ಬಿದ್ದ ಮಹಿಳೆ

ಆಸ್ಪತ್ರೆ ಸಾಗಿಸುವ ಸಂದರ್ಭ ಸಾವು

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಅನಂತಶಯನ ನಾಗರಬಾವಿ ಕೆರೆಗೆ ಮಹಿಳೆಯೋರ್ವರು ಆಕಸ್ಮಿಕವಾಗಿ ಜಾರಿಬಿದ್ದ ಘಟನೆ ನ. 24ರಂದು ಸಂಭವಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿರುತ್ತಾರೆ. ದಾನಶಾಲೆ ನಿವಾಸಿ ಗೌರಮ್ಮ (65) ಎಂಬವರೇ ಸಾವಿಗೀಡಾದ ಮಹಿಳೆ.
ಗೌರಮ್ಮ ಅವರ ಗಂಡ ಎರಡು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಅದೇ ನೋವಿನಲ್ಲಿದ್ದರು ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ವಾಕಿಂಗ್‌ ತೆರೆಳುವ ಸಂದರ್ಭ ದುರಂತ ಸಂಭವಿಸಿದೆ. ತಕ್ಷಣವೇ ಸ್ಥಳೀಯರು ಆಕೆಯನ್ನು ಕೆರೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ಆಕೆಯು ದಾರಿ ಮಧ್ಯೆ ಅಸುನೀಗಿದರು. ಎಪಿಎಂಸಿ ಉಪಾಧ್ಯಕ್ಷ ಜೆರಾಲ್ಡ್‌ ಡಿಸಿಲ್ವಾ, ಮಾಜಿ ಪುರಸಭಾ ಸದಸ್ಯ ಪ್ರಕಾಶ್‌ ರಾವ್‌, ಇಕ್ಬಾಲ್‌ ಮೊದಲಾದವರು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾಗ್ಯೂ ಆಕೆಯ ಜೀವ ಉಳಿಸಿಕೊಳ್ಳಲಾಗಿಲ್ಲ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆ ಎಸ್‌ಐ ಮಧು ಬಿ.ಇ. ತಂಡ ಭೇಟಿ ನೀಡಿ ಪರಿಶೀಲಿಸಿದೆ.





























































































































































































































error: Content is protected !!
Scroll to Top