ಪೆರ್ವಾಜೆ ಶಾಲೆಗೆ ಲೊಕಾಯುಕ್ತ ಎಸ್‌ಪಿ ಭೇಟಿ

ಕಾರ್ಕಳ : ಪೆರ್ವಾಜೆ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ಮಂಗಳೂರು ವಿಭಾಗದ ಲೋಕಾಯುಕ್ತ ಅಧೀಕ್ಷಕ ಎ. ಕುಮಾರಸ್ವಾಮಿಯವರು ಅ. 4ರಂದು ಭೇಟಿ ನೀಡಿದರು. ಕೋವಿಡ್‌ ನಿಯಮ ಪರಿಪಾಲನೆ ವೀಕ್ಷಿಸಿದರು. ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅನುವು ಮಾಡಿಕೊಡುವಂತೆ ಶಿಕ್ಷಕರಿಗೆ ತಿಳಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಸರಿಯಾಗಿ ಮಾಸ್ಕ್ ಧರಿಸುವಂತೆ, ಕೋವಿಡ್‌ ನಿಯಮ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಲೋಕಾಯುಕ್ತ ನಿರೀಕ್ಷಕರಾದ ರಾಜಶೇಖರ ಎಲ್., ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಮುಖ್ಯಶಿಕ್ಷಕಿ ಹರ್ಷಿಣಿ ಕೆ. ಉಡುಪಿ ಲೋಕಾಯುಕ್ತ ಸಿಬ್ಬಂದಿ ನಾಗೇಶ್ ಉಡುಪ, ರಮೇಶ್, ಸತೀಶ್ ಉಪಸ್ಥಿತರಿದ್ದರು.





























































































































































































































error: Content is protected !!
Scroll to Top