ಕಾರ್ಕಳ : ಶ್ರೀ ರಾಮ ಯೋಗ ಕೇಂದ್ರದ ಯೋಗಗುರು ಎಚ್. ಎಸ್. ಕೋರಿ ಅವರನ್ನು ಅ. 3ರಂದು ತಾಲೂಕು ಕಚೇರಿ ಬಳಿಯ ಯೋಗ ಕೇಂದ್ರದಲ್ಲಿ ಸನ್ಮಾನಿಸಲಾಯಿತು. ರೇಶ್ಮೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಎಚ್. ಎಸ್. ಕೋರಿ ಅವರು ಕಳೆದ ದಶಕಗಳಿಂದ ಯೋಗಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ನಿವೃತ್ತಿಗೊಂಡು ತನ್ನೂರಾದ ಉತ್ತರ ಕನ್ನಡಕ್ಕೆ ತೆರಳುತ್ತಿರುವ ಅವರನ್ನು ಯೋಗಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು. ಡಾ. ಸತೀಶ್ ಶೆಟ್ಟಿ, ಸಂಜಯ್ ಕುಮಾರ್, ಮೋಹನ್ ದಾಸ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.