ಕಾರ್ಕಳ : ವ್ಯಕ್ತಿಯೋರ್ವರು ದಾರಿಮಧ್ಯೆ ಕುಸಿದು ಬಿದ್ದು ಮೃತಪಟ್ಟ ಘಟನೆ ಶಿರ್ಲಾಲು ಗ್ರಾಮದ ಬೊರ್ದಲ್ಕೆ ಎಂಬಲ್ಲಿಂದ ವರದಿಯಾಗಿದೆ. ಬೊರ್ದಲ್ಕೆ ಬಾಬು ಪೂಜಾರಿ (69) ಎಂಬವರೇ ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಬುಧವಾರ ಬೆಳಗ್ಗೆ ಮನೆಯಿಂದ ಹೊರಹೋದವರು ವಿಪರೀತ ಮದ್ಯಪಾನ ಮಾಡಿ ದಾರಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.