ಜೆಡಿಎಸ್‌ ಕಾರ್ಕಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾಗಿ ಶ್ರೀಕಾಂತ್‌ ಪೂಜಾರಿ

ಕಾರ್ಕಳ : ಜೆಡಿಎಸ್‌ ಕಾರ್ಕಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಕುಚ್ಚೂರುವಿನ ಶ್ರೀಕಾಂತ್‌ ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಆ. 29ರಂದು ಉಡುಪಿಯ ಪಕ್ಷದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯಾಧ್ಯಕ್ಷರಾಗಿ ರಂಜಿತ್‌ ಬಿರ್ವ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್‌ ದೇವಾಡಿಗ, ಶಿವಪ್ರಸಾದ್‌ ಶೆಟ್ಟಿ, ಉಪಾಧ್ಯಕ್ಷರಾಗಿ ಸಂಪತ್‌ ಭಂಡಾರಿ, ರಾಕೇಶ್‌ ಕುಮಾರ್‌, ಖಜಾಂಜಿಯಾಗಿ ಸಯ್ಯದ್‌ ಹರ್ಷದ್‌, ಕಾರ್ಯದರ್ಶಿಯಾಗಿ ಸಂದೇಶ್‌ ರೆಂಜಾಳ, ಸುಲೈಮಾನ್‌ ನೆಲ್ಲಿಕಾರು, ನಜೀರ್‌ ಬಂಗ್ಲೆಗುಡ್ಡೆ, ಸಾಕು ಬೆಳಂಜೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































































































































error: Content is protected !!
Scroll to Top