ಹೆಬ್ರಿ ಅಮೃತ ಭಾರತಿಗೆ ಲಯನ್ಸ್ ಜಿಲ್ಲಾ ಸಮುದಾಯ ಅನುದಾನ ಹಸ್ತಾಂತರ

ಹೆಬ್ರಿ : ಹೆಬ್ರಿ ಅಮೃತ ಭಾರತಿ ಶಿಕ್ಷಣ ಸಂಸ್ಥೆಗೆ ಜಿಲ್ಲಾ ಸಮುದಾಯ ಅನುದಾನ LCIF ವತಿಯಿಂದ ಪ್ರಯೋಗಾಲಯದ ಪರಿಕರ ಖರೀದಿಗಾಗಿ ಮಂಜೂರಾದ 6 ಲಕ್ಷ ಮೊತ್ತದಲ್ಲಿ ಅಂತಿಮ ಕಂತಿನ ರೂ. 3,73,937 ಚೆಕ್ ನ್ನು ಅಮೃತ ಭಾರತಿ ಸಂಸ್ಥೆಯ ಅಧ್ಯಕ್ಷ ರವಿ ರಾವ್ ರವರಿಗೆ ಹಸ್ತಾಂತರಿಸಲಾಯಿತು.
ಲಯನ್ಸ್ ಜಿಲ್ಲೆ 317C ಜಿಲ್ಲಾ ಗವರ್ನರ್ ನೀಲಕಂಠ ಎಂ. ಹೆಗಡೆ ಸಹಕಾರದಲ್ಲಿ ದೊರೆತ ಅನುದಾವನ್ನು ಜು. 12 ರಂದು ಹಸ್ತಾಂತರ ಮಾಡಲಾಯಿತು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಜಿ. ಆಚಾರ್ಯ, ಹೆಬ್ರಿ ಸಿಟಿ ಲಯನ್ಸ್ ನಿರ್ಗಮಿತ ಅಧ್ಯಕ್ಷೆ ಡಾ. ಭಾರ್ಗವಿ ಆರ್. ಐತಾಳ್, ನೂತನ ಅಧ್ಯಕ್ಷ ವಾದಿರಾಜ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಲಯನ್ಸ್ ಸ್ಥಾಪಕ ಅಧ್ಯಕ್ಷ ಎಚ್. ದಿನಕರ ಪ್ರಭು, ಕಾರ್ಯದರ್ಶಿ ಕೆ ರಾಮಚಂದ್ರ ಭಟ್, ನೂತನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಕಾಲೇಜು ಉಪನ್ಯಾಸಕ ವಿಜಯ ಶೆಟ್ಟಿ, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.





























































































































































































































error: Content is protected !!
Scroll to Top