ಕಾರ್ಕಳ : ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳ ಕರಿಯಕಲ್ಲು ನಿವಾಸಿ ರಾಜಾರಾಮ ರಾವ್ (55) ಜೂ. 14ರಂದು ಮೃತಪಟ್ಟಿರುತ್ತಾರೆ. ಜೂ. 8ರಂದು ಜಾರ್ಕಳ ಬಳಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜಾರಾಮ ರಾವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಕೊನೆಯುಸಿರೆಳೆದರು. ವೃತ್ತಿಯಲ್ಲಿ ಟೈಲರಿಂಗ್, ಟೆಂಪೋ ಚಾಲಕರಾಗಿ ದುಡಿಯುತ್ತಿದ್ದ ರಾಜಾರಾಮ ಅವರು ಕರಿಯಕಲ್ಲು ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನೂ ನೆರವೇರಿಸುತ್ತಿದ್ದರು.
ಕೊರೊನಾದಿಂದ ಮೃತಪಟ್ಟ 40ಕ್ಕೂ ಅಧಿಕ ಶವಗಳಿಗೆ ಅಂತಿಮ ಸಂಸ್ಕಾರ ನೇರವೇರಿಸಿದ್ದ ರಾಜಾರಾಮ ರಾವ್
ಕೊರೊನಾದಿಂದ ಮೃತಪಟ್ಟ ಸುಮಾರು 40ಕ್ಕೂ ಅಧಿಕ ಮೃತದೇಹಗಳಿಗೆ ಮುಕ್ತಿ ನೀಡಿದ ಇವರು ಕಳೆದ 2 ದಶಕಗಳಲ್ಲಿ ಸಾವಿರಕ್ಕೂ ಅಧಿಕ ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಿರುತ್ತಾರೆ. ಕ್ರೀಡೆ, ಭಜನೆ, ರಕ್ತದಾನ, ಸಾಮಾಜಿಕ ಕಾರ್ಯಗಳಲ್ಲೂ ರಾಜಾರಾಮ ಅವರು ಸಕ್ರಿಯರಾಗಿದ್ದರು ಎಂದು ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ತಿಳಿಸಿದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.