ಕಾರ್ಕಳ, ನ. 2 : ಕರುಣಾಳು ಬಾ ಬೆಳಕೆ ಕಾರ್ಯಕ್ರಮದಡಿಯಲ್ಲಿ ದಿ| ಸಂತೋಷ್ ಮಲ್ಯ ಅವರ ಸ್ಮರಣಾರ್ಥ ಅವರ ಗೆಳೆಯರ ಬಳಗ ಹಾಗೂ ಯುವವಾಹಿನಿ ಕಾರ್ಕಳ ಘಟಕ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅ.31 ರಂದು ಅತ್ತೂರು ಪರಿಸರದ ಅಮಿತಾ ಅವರ ಮನೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 6ನೇ ಸೋಲಾರ್ ಘಟಕವನ್ನು ಅಳವಡಿಸಲಾಯಿತು.
ರೋಟರಿ ಆನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ನಿರ್ದೇಶಕರಾದ ಅಶೋಕ್ ಸುವರ್ಣ, ರಾಕೇಶ್ ಅಮೀನ್, ಸುರೇಂದ್ರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕರುಣಾಳು ಬಾ ಬೆಳಕೆ ಯೋಜನೆಯಡಿ ಸೋಲಾರ್ ಘಟಕ ಕೊಡುಗೆ
Recent Comments
ಕಗ್ಗದ ಸಂದೇಶ
on