ಕಾರ್ಕಳ : ನಕ್ಸಲ್ ನಿಗ್ರಹ ದಳ (ಎಎನ್ಎಫ್) ಕಾರ್ಕಳ ಇಲ್ಲಿನ ನೂತನ ವರಿಷ್ಠಾಧಿಕಾರಿಯಾಗಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. 2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅವರು ಕಲಬುರಗಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಕಳ ಕೇಂದ್ರ ಘಟಕ ಹೊಂದಿರುವ ನಕ್ಸಲ್ ನಿಗ್ರಹ ದಳದಲ್ಲಿ 4 ತಿಂಗಳಿನಿಂದ ಎಎನ್ಎಫ್ ಘಟಕದ ವರಿಷ್ಠಾಧಿಕಾರಿ ಹುದ್ದೆ ಖಾಲಿಯಿರುವುದರಿಂದ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪ್ರಭಾರ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.